ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಭೀಕರ ಅಪಘಾತ ಭಾರತವನ್ನೇ ಕಂಗಾಲು ಮಾಡಿದೆ. ಈ ಭಯಾನಕ ಘಟನೆಯ ಬೆನ್ನಲ್ಲೇ ದೇಶಾದ್ಯಂತ ಗಣ್ಯರಿಂದ ಸಂತಾಪಗಳ ಮಹಾಪೂರವೇ ಹರಿದುಬಂದಿದ್ದು, ರಾಕಿಂಗ್ ಸ್ಟಾರ್ ಯಶ್ ಕೂಡ ಈ ಕುರಿತು ಭಾವುಕ ಟ್ವೀಟ್ ಮಾಡಿದ್ದಾರೆ.
“ಇದು ಗ್ರಹಿಸಲಾಗದ ದುರಂತ. ಯಾವುದೇ ಪದಗಳು ನಿಜವಾಗಿಯೂ ದುಃಖಿತ ಕುಟುಂಬಗಳ ಈ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಯಾಣಿಕ, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನನ್ನ ಹೃದಯ ತುಂಬಿದ ಪ್ರಾರ್ಥನೆಗಳು. ಈ ದುಃಖದ ಕ್ಷಣದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ,” ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.
ನಟಿ ರಾಧಿಕಾ ಪಂಡಿತ್ ಸಹ ಈ ದುಃಖದಲ್ಲಿ ಭಾಗಿಯಾಗಿದ್ದು, ಇನ್ಸ್ಟಾಗ್ರಾಂನಲ್ಲಿ, ಈ ದುರಂತ ಊಹಿಸಲಾಗದಷ್ಟು ಭೀಕರ. ಪ್ರಾಣ ಕಳೆದುಕೊಂಡ ಕುಟುಂಬದವರೊಂದಿಗೆ ನನ್ನ ಪ್ರಾರ್ಥನೆ ಇದೆ. ಈ ನಷ್ಟದ ಪ್ರಮಾಣವು ವಿನಾಶಕಾರಿಯಾಗಿದೆ ಎಂದು ಹೇಳಿದ್ದಾರೆ.
ಅಪಘಾತದ ಹಿಂದಿನ ನಿಖರ ಕಾರಣಗಳು ತನಿಖೆಯಿಂದ ಮಾತ್ರ ಹೊರಬರಲಿವೆ. ಆದರೆ ಈ ಘಟನೆಯು ದೇಶದಾದ್ಯಂತ ಭಾವುಕ ಪ್ರತಿಕ್ರಿಯೆ ಹುಟ್ಟುಹಾಕಿದ್ದು ನಿಜ.
Terrible news about the Air India flight from Ahmedabad. My heart aches for every passenger, crew member, and all the innocent lives tragically impacted on the ground. This is a tragedy beyond comprehension. To the grieving families, while no words can truly ease this pain, we…
— Yash (@TheNameIsYash) June 12, 2025