ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 1ರಿಂದ ರಾಜ್ಯದಲ್ಲಿ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ. ಹಾಲು, ತರಕಾರಿ ಇತ್ಯಾದಿ ವಸ್ತುಗಳು ದುಬಾರಿಯಾಗಲಿವೆ.
ಹಾಲು ಲೀಟರ್ಗೆ 3 ರೂ ಹೆಚ್ಚಳ
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲು ನಿರ್ದರಿಸಿದೆ. ಆಗಸ್ಟ್ 1ರಿಂದ ನಂದಿನಿ ಹಾಲು ಲೀಟರ್ಗೆ 3 ರೂನಷ್ಟು ದುಬಾರಿ ಆಗಲಿದೆ.
ಟೊಮೆಟೋ ಬೆಲೆ
ಟೊಮೆಟೋ ಬೆಲೆ ಏರಿದ್ದರಿಂದ ಜನರು ಕಂಗಾಲಾಗಿದ್ದು, ಕೋಲಾರದಲ್ಲಿ ಭರ್ಜರಿಯಾಗಿ ಟೊಮೆಟೋ ಬೆಳೆಯಲಾಗಿದ್ದರೂ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ 200 ರೂವರೆಗೂ ಹೋಗಿತ್ತು. ಈಗಲೂ ಕೂಡ 150 ರೂ ಆಸುಪಾಸಿನಲ್ಲಿ ಟೊಮೆಟೋ ಬೆಲೆ ಇದೆ. ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರಟ್, ಬೀನ್ಸ್, ಬಟಾಣಿ ಇತ್ಯಾದಿ ತರಕಾರಿಗಳ ಬೆಲೆಗಳೂ ಕೂಡ ಎರಡು ಪಟ್ಟು ಹೆಚ್ಚಾಗಿವೆ.
ಮದ್ಯ ಇನ್ನಷ್ಟು ದುಬಾರಿ
ಕರ್ನಾಟಕ ಸರ್ಕಾರ ಮದ್ಯದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಭಾರತದಲ್ಲಿ ನಿರ್ಮಿಸಲಾದ ವಿದೇಶೀ ಮದ್ಯದ ಮೇಲೆ ಶೇ. 20ರಷ್ಟು ಸುಂಕ ಹೆಚ್ಚಿಸಲಾಗಿದೆ. ಇನ್ನು, ಬಿಯರ್ ಮೇಲಿನ ಅಬಕಅರಿ ಸುಂಕ ಶೇ. 175ರಿಂದ ಶೇ. 185ಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್ 1ರಿಂದ ಬಿಯರ್ ಸೇರಿ ವಿವಿಧ ಮದ್ಯ ಪೇಯಗಳ ಬೆಲೆ ಹೆಚ್ಚಾಗಲಿದೆ.
ಹೊಟೇಲ್ ಊಟವೂ ದುಬಾರಿ
ಹಾಲು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿರುವ ಹಿನ್ನೆಲೆಯಲ್ಲಿ ಹೊಟೇಲ್ ಊಟವೂ ದುಬಾರಿಯಾಗಲಿವೆ.
ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ
ಕಳೆದ ಬಜೆಟ್ನಲ್ಲಿ ಸರ್ಕಾರ ಸ್ಥಿರಾಸ್ತಿಗಳಿಗೆ ಮಾರ್ಗಸೂಚಿ ದರವನ್ನು (Guidance Value) ಶೇ. 14ರವರೆಗೆ ಏರಿಸುವುದಾಗಿ ತಿಳಿಸಲಾಗಿತ್ತು. ಆಗಸ್ಟ್ 1ರಿಂದ ಇದು ಚಾಲನೆಗೆ ಬರಲಿದೆ.ಮಾರ್ಗಸೂಚಿ ದರ ಅಥವಾ ಗೈಡೆನ್ಸ್ ವ್ಯಾಲ್ಯೂ ಎಂಬುದು ಸ್ಥಿರಾಸ್ತಿಯನ್ನು ನೊಂದಾಯಿಸಲು ಇರುವ ಕನಿಷ್ಠ ಮೌಲ್ಯ ಎನ್ನಲಾಗಿದೆ.
ಕೆಎಸ್ಸಾರ್ಟಿಸಿ ಗುತ್ತಿಗೆ ದರ ಹೆಚ್ಚಳ
ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಕೆಎಸ್ಸಾರ್ಟಿಸಿ, ತನ್ನ ನಷ್ಟ ಸರಿದೂಗಿಸಲು ಈಗ ಬೇರೆ ದರಗಳನ್ನು ಹೆಚ್ಚಿಸುತ್ತಿದೆ. ಖಾಸಗಿ ಕಂಪನಿಗಳಿಗೆ ಬಸ್ಸುಗಳ ಎರವಲು ಸೇವೆ ಕೊಡುವ ಕೆಎಸ್ಆರ್ಟಿಸಿ, ಈಗ ಅದರ ದರ ಹೆಚ್ಚಿಸಿದೆ. ಈ ಕಾಂಟ್ರಾಕ್ಟ್ ಬಸ್ಸುಗಳಲ್ಲಿ ಒಂದು ಕಿಮೀಗೆ 2ರಿಂದ 5 ರೂವರೆಗೂ ದರ ಹೆಚ್ಚಿಸಲಾಗಿದೆ.
ಗಣಿಗಾರಿಕೆಯಲ್ಲಿ ರಾಜಧನ ಹೆಚ್ಚಳವಾಗುತ್ತಿದೆ. ಇದರಿಂದ ಮರಳು ಇತ್ಯಾದಿ ಕಟ್ಟಡ ನಿರ್ಮಾಣ ವಸ್ತುಗಳು ದುಬಾರಿ ಆಗುತ್ತವೆ.ಶಾಲಾ ವಾಹನ, ಕ್ಯಾಬ್ ಟ್ರಕ್ಗಳ ಮೇಲೆ ಮೋಟಾರು ವಾಹನ ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಸರಕು ಸಾಗಣಿ, ಪ್ರಯಾಣ ದರಗಳು ಹೆಚ್ಚುವ ನಿರೀಕ್ಷೆ ಇದೆ.