ಅಧಿವೇಶನದ ಎರಡನೇ ದಿನ | ಇಂದು ಮತ್ತಷ್ಟು ಶಾಸಕರಿಂದ ಪ್ರಮಾಣವಚನ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಅಧಿವೇಶನದ ಎರಡನೇ ದಿನವಾಗಿದ್ದು, ಮತ್ತಷ್ಟು ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಶಾಸಕರಿವರು..

  • ಬೆಳಗಾವಿ ಗ್ರಾಮೀಣ ಶಾಸಕಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್
  • ಕಲಘಟಗಿ ಕ್ಷೇತ್ರದ ಶಾಸಕರಾಗಿ ಸಂತೋಷ್​ ಲಾಡ್​
  • ಗುಬ್ಬಿ ಕ್ಷೇತ್ರದ ಶಾಸಕರಾಗಿ ಎಸ್​.ಆರ್.ಶ್ರೀನಿವಾಸ
  • ಹು-ಧಾ ಸೆಂಟ್ರಲ್ ಶಾಸಕರಾಗಿ ಮಹೇಶ್​ ಟೆಂಗಿನಕಾಯಿ
  • ಶಿವಾಜಿನಗರ ಕ್ಷೇತ್ರದ ಶಾಸಕರಾಗಿ ರಿಜ್ವಾನ್ ಅರ್ಷದ್
  • ಮಹದೇವಪುರ ಕ್ಷೇತ್ರದ ಶಾಸಕಿಯಾಗಿ ಮಂಜುಳಾ
  • ಹೊನ್ನಾಳಿ ಕ್ಷೇತ್ರದ ಶಾಸಕರಾಗಿ ಶಾಂತನಗೌಡ
  • ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿ ಶರಣು ಸಲಗರ
  • ಅಫಜಲಪುರ ಶಾಸಕರಾಗಿ ಎಂ.ವೈ.ಪಾಟೀಲ್
  • ಸಿ.ವಿ.ರಾಮನ್​ ನಗರ ಶಾಸಕರಾಗಿ ಎಸ್​.ರಘು
  • ಹಿರಿಯೂರು ಕ್ಷೇತ್ರದ ಶಾಸಕರಾಗಿ ಡಿ.ಸುಧಾಕರ್
  • ಮಂಡ್ಯ ಕ್ಷೇತ್ರದ ಶಾಸಕರಾಗಿ ರವಿಕುಮಾರ್ ಗಣಿಗ
  • ನವಲಗುಂದ ಕ್ಷೇತ್ರದ ಶಾಸಕರಾಗಿ ಎನ್​.ಹೆಚ್​.ಕೋನರೆಡ್ಡಿ
  • ಕಾರ್ಕಳ ಕ್ಷೇತ್ರದ ಶಾಸಕರಾಗಿ ಸುನೀಲ್ ಕುಮಾರ್

ಇನ್ನು ಸದನದಲ್ಲಿದ್ದರೂ ಒಳ್ಳೆಯ ಸಮಯ ಬಂದಿಲ್ಲ, ರಾಹುಕಾಲ ಕಳೆದ ನಂತರ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ವಿಳಂಬ ಮಾಡಿದ್ದಾರೆ. ಅವರ ಹೆಸರು ಕರೆದಾಗಲೂ ಹತ್ತು ನಿಮಿಷ ಸಮಯ ನೀಡಿ ಎಂದು ಮನವಿ ಮಾಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here