ಇರಾನ್​ನಿಂದ ಬಂದಿಳಿದ ಎರಡನೇ ವಿಮಾನ, ಈವರೆಗೆ 517 ಭಾರತೀಯರು ವಾಪಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇರಾನ್​ನಿಂದ ಇಲ್ಲಿಯವರೆಗೆ ಆಪರೇಷನ್​ ಸಿಂಧು ಅನ್ವಯ 500ಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇರಾನ್​- ಇಸ್ರೇಲ್​ ಸಂಘರ್ಷದ ಬಳಿಕ ಇರಾನ್​ನಲ್ಲಿರುವ ಭಾರತೀಯರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ವಿದೇಶಾಂಗ ಸಚಿವಾಲಯವು ಸ್ಥಳಾಂತರಿಸುವ ಕಾರ್ಯಾಚರಣೆಯ ಸ್ಥಿತಿಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

ಸ್ಥಳಾಂತರ ನಡೆಸಿದವರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿದ್ದು, ಅವರೆಲ್ಲಾ ಶುಕ್ರವಾರ ತಡರಾತ್ರಿ ದೆಹಲಿ ತಲುಪಿಸಿದ್ದಾರೆ.

ಇರಾನ್​ನಲ್ಲಿರುವ ಭಾರತೀಯರ ಸ್ಥಳಾಂತರವನ್ನು ಬುಧವಾರದಿಂದ ಆಪರೇಷನ್​ ಸಿಂಧು ಕಾರ್ಯಾಚರಣೆ ಮೂಲಕ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಘೋಷಣೆ ಮಾಡಿತ್ತು.

ಆಪರೇಷನ್​ ಸಿಂಧು ವಿಮಾನಗಳು ಭಾರತೀಯ ನಾಗರಿಕರನ್ನು ಮನೆಗೆ ಕರೆತರುತ್ತಿವೆ. ಇರಾನ್​ನಿಂದ 290 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಯಾತ್ರಾರ್ಥಿಗಳು ಇದ್ದಾರೆ. ಜೂನ್​ 20ರಂದು ರಾತ್ರಿ 11.30ಕ್ಕೆ ನವದೆಹಲಿಗೆ ವಿಮಾನವನ್ನು ಕಾರ್ಯದರ್ಶಿ ಅರುಣ್​ ಚಟರ್ಜಿ ಸ್ವಾಗತಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್​​ ಜೈಸ್ವಾಲ್​ ಎಕ್ಸ್​ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!