CINE | ಕನ್ನಡದಲ್ಲಿ ‘ಮಹಾಭಾರತ’ ಸಿನಿಮಾ ಆದ್ರೆ ಈ ನಟ-ನಟಿಯರು ಸೂಟ್ ಆಗ್ತಾರಾ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಭಾರತ ಕುರಿತಾಗಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು ಈಗಾಗಲೇ ಬಂದಿವೆ. ಕನ್ನಡದಲ್ಲಿಯೂ ಕೂಡ ಮಹಾಭಾರತ ಕುರಿತಾದ ಸಿನಿಮಾಗಳು ಬಂದಿವೆ, ಇದೀಗ ಕನ್ನಡದಲ್ಲಿ ಮಹಾಭಾರತ ಸಿನಿಮಾ ಮಾಡಿದ್ರೆ ಯಾವ್ಯಾವ ನಟರಿಗೆ ಯಾವ ಪಾತ್ರ ಸೆಟ್ ಆಗುತ್ತದೆ ಅನ್ನೋ ಕುತೂಹಲಕ್ಕೆ ಎಐ ಕಲಾವಿದರು ಬ್ರೇಕ್ ಹಾಕಿದ್ದಾರೆ. ಯಾರಿಗೆ ಯಾವ ಪಾತ್ರ ನೋಡಿ..

ಶಕುನಿಯಾಗಿ ರಾಜ್ ಬಿ ಶೆಟ್ಟಿ

ಶಕುನಿ ಪಾತ್ರವನ್ನು ನಟ ರಾಜ್​ ಬಿ. ಶೆಟ್ಟಿ ಅವರು ನಿಭಾಯಿಸಿದರೆ ಹೇಗೆ ಕಾಣಬಹುದು ಎಂಬುದನ್ನು ಈ ಫೋಟೋ ವಿವರಿಸುತ್ತಿದೆ. ಭೀಮನಂತೆ ಧ್ರುವ ಸರ್ಜಾ

ಬಲ ಭೀಮನಂತೆ ಕಾಣುತ್ತಿದ್ದಾರೆ ನಟ ಧ್ರುವ ಸರ್ಜಾ. ಅವರ ಕಟ್ಟುಮಸ್ತಾದ ದೇಹವು ಈ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆ. ಸುದೀಪ್ ಶ್ರೀಕೃಷ್ಣ

ಕೃಷ್ಣನ ಗೆಟಪ್​ನಲ್ಲಿ ಕಿಚ್ಚ ಸುದೀಪ್​ ಅವರ ಫೋಟೋ ಹೀಗಿದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಅವರು ಕೃಷ್ಣನಾಗಿ ನಟಿಸಿದ್ದರು.ಕರ್ಣನಂತೆ ಯಶ್

ಕರ್ಣನ ಪಾತ್ರಕ್ಕೆ ಯಶ್​ ಸೂಕ್ತವಾಗುತ್ತಾರೆ. ಅವರು ಈ ಗೆಟಪ್​ನಲ್ಲಿ ಇರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.ದ್ರೌಪದಿಯಾಗಿ ರಚಿತಾ ರಾಮ್

ರಚಿತಾ ರಾಮ್​ ಅವರಿಗೆ ದ್ರೌಪದಿ ಪಾತ್ರ ನೀಡಿದರೆ ಈ ಗೆಟಪ್​​ನಲ್ಲಿ ಅವರು ಕಂಗೊಳಿಸಬಹುದು. ಈ ಫೋಟೋ ಕೂಡ ವೈರಲ್​ ಆಗಿದೆ. ಭೀಷ್ಮನಾಗಿ ರಿಷಭ್ ಶೆಟ್ಟಿ

ರಿಷಬ್​ ಶೆಟ್ಟಿ ಅವರು ಭೀಷ್ಮನ ಪಾತ್ರ ಮಾಡಿದರೆ ಈ ರೀತಿ ಕಾಣಬಹುದು. ಮಹಾಭಾರತದಲ್ಲಿ ಇದು ಕೂಡ ಬಹಳ ಮುಖ್ಯವಾದ ಪಾತ್ರ. ದ್ರೋಣಾಚಾರ್ಯರಾಗಿ ಶಿವಣ್ಣ

ಶಿವರಾಜ್​ಕುಮಾರ್​ ಅವರು ದ್ರೋಣಾಚಾರ್ಯರ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎನ್ನುತ್ತಿದೆ ಎಐ ಮೂಲಕ ವಿನ್ಯಾಸಗೊಂಡ ಈ ಫೋಟೋ.ಪುನೀತ್ ರಾಜ್ ಕುಮಾರ್ ಅರ್ಜುನ

ಅರ್ಜುನನ ಪಾತ್ರದಲ್ಲಿ ಪುನೀತ್​ ನಟಿಸಿದರೆ ಹೀಗಿರುತ್ತದೆ. ಬಿಲ್ಲು ಹಿಡಿದು ನಿಂತಿರುವ ಗೆಟಪ್​ನಲ್ಲಿ ಈ ಫೋಟೋ ಮೂಡಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!