ಪೂಂಚ್ ಶೆಲ್​ ದಾಳಿ​ ಸಂತ್ರಸ್ತರನ್ನು ಭೇಟಿಯಾದ ಶಾ: ಶೀಘ್ರವೇ ಪರಿಹಾರದ ಪ್ಯಾಕೇಜ್​ ನೀಡುವ ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪೂಂಚ್​​ ಜಿಲ್ಲೆಗೆ ಇಂದು ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು, ಪಾಕಿಸ್ತಾನದ ಶೆಲ್​ ದಾಳಿಯಿಂದ ಹಾನಿಗೊಳಗಾದ ಸಂತ್ರಸ್ತರ ಜೊತೆ ಮಾತನಾಡಿ, ಶೀಘ್ರವೇ ಕೇಂದ್ರದಿಂದ ಪರಿಹಾರದ ಪ್ಯಾಕೇಜ್​ ನೀಡುವ ಭರವಸೆ ನೀಡಿದರು.

ಆಪರೇಷನ್​ ಸಿಂದೂರ ಬಳಿಕ ಇದೇ ಮೊದಲ ಬಾರಿಗೆ ಪೂಂಚ್​​ಗೆ ಭೇಟಿ ನೀಡಿದ ಶಾ, ಶೆಲ್​ ದಾಳಿಯಲ್ಲಿ ಮನೆಗಳು, ಉದ್ಯಮ ಮತ್ತು ಧಾರ್ಮಿಕ ಸ್ಥಳಗಳು ಧ್ವಂಸಗೊಂಡಿದ್ದು, ಈ ಹಾನಿಗೆ ಕೇಂದ್ರದಿಂದ ಪರಿಹಾರ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಎರಡು ದಿನಗಳ ಪ್ರವಾಸದಲ್ಲಿರುವ ಶಾ ಅವರ ಜೊತೆಗೆ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಮತ್ತು ದೆಹಲಿ ಸಚಿವ ಮಜಿಂದರ್​ ಸಿಂಗ್​ ಸರ್ಸಾ ಇದ್ದರು.

ಪೂಂಚ್​​ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಖಂಡನಾರ್ಹ ಶೆಲ್​ ದಾಳಿ ನಡೆಸಿದೆ. ಈ ಕೃತ್ಯದಿಂದ ವಿಶೇಷವಾಗಿ ಪೂಂಚ್​ ಜನರು ಹಾನಿಗೊಂಡಿದ್ದಾರೆ. ಭಾರತ ನಾಗರಿಕರನ್ನು ಉದ್ದೇಶಿಸಿ ದಾಳಿ ಮಾಡದೇ ಕೇವಲ ಭಯೋತ್ಪಾದಕರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿತ್ತು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!