ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಾಕ್: ದರ್ಶನ್ ಆಪ್ತ ಪ್ರದೋಶ್ ಅಜ್ಜಿ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗ್ಯಾಂಗ್ ಗೆ ಆಘಾತ ಎದುರಾಗಿದೆ. ದರ್ಶನ್ ಆಪ್ತ, ಆರೋಪಿ ಪ್ರದೋಶ್ ಅಜ್ಜಿ ಸಾವನ್ನಪ್ಪಿದ್ದಾರೆ.

ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ಆರೋಪಿಗಳಿಗೆ ಕೆಲ ದಿನಗಳಿಂದ ಹತ್ತಿರದ ಸಂಬಂಧಿಗಳ ಅಗಲಿಕೆ ಮತ್ತೊಂದು ಶಾಕ್ ನೀಡಿದೆ.

ಇತ್ತೀಚೆಗೆ ಆರೋಪಿಗಳಾದ ಅನು ತಂದೆ ಹಾಗೂ ರಘು ತಾಯಿ ನಿಧನ ಹೊಂದಿದ್ದರು. ಇದೀಗ ಆರೋಪಿ ಪ್ರದೋಶ್ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಿವಾಸದಲ್ಲಿ ಪ್ರದೋಶ್ ಅಜ್ಜಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪ್ರದೋಶ್, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 14ನೇ ಆರೋಪಿಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!