ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ನ್ಯಾಯಮೂರ್ತಿಯತ್ತ ಶೂ ಎಸೆತ ಪ್ರಕರಣ ದೇಶಾದ್ಯಂತ ತೀವ್ರ ಹಾಗೂ ಖಂಡನೆಗೆ ಗುರಿಯಾಗಿರುವಂತೆಯೇ ‘ಅದೊಂದು ಮರೆತ ಅಧ್ಯಾಯ’ ಎಂದು CJI ಬಿಆರ್ ಗವಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 6 ರಂದು ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದಾಗ ನಾನು ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಆಘಾತಕ್ಕೊಳಗಾಗಿದ್ದೇವು. ಆದರೆ ‘ಇದೊಂದು ಮರೆತ ಅಧ್ಯಾಯ’ ಎಂದು ಹೇಳಿದ್ದಾರೆ.
ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ನಲ್ಲಿ ಮಾತನಾಡಿದ ಬಿಆರ್ ಗವಾಯಿ, ಸೋಮವಾರ ನಡೆದ ಘಟನೆಯಿಂದ ನನ್ನ ಸಹೋದರ ಸಹೋದ್ಯೋಗಿ ತುಂಬಾ ಆಘಾತಕ್ಕೊಳಗಾಗಿದ್ದೇವೆ. ಆದರೆ ನಮ್ಮ ಪಾಲಿಗೆ ಇದು ಮರೆತು ಹೋದ ಅಧ್ಯಾಯ ಎಂದು ಹೇಳಿದರು.
ಈ ವೇಳೆ ಸಿಜೆಐ ಅವರ ಪಕ್ಕದಲ್ಲಿದ್ದ ಕುಳಿತಿದ್ದ ನ್ಯಾ, ಉಜ್ವಲ್ ಭುಯಾನ್, ತಪ್ಪಿತಸ್ಥ ವಕೀಲರ ವಿರುದ್ಧದ ಕ್ರಮಕ್ಕೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು. ನನಗೆ ಈ ಬಗ್ಗೆ ನನ್ನದೇ ಆದ ಅಭಿಪ್ರಾಯವಿದೆ. ಅವರು ಸಿಜೆಐ, ಇದು ತಮಾಷೆಯ ವಿಷಯವಲ್ಲ! ಈ ದಾಳಿಯು “ಸುಪ್ರೀಂ ಕೋರ್ಟ್ಗೆ ಮಾಡಿದ ಅವಮಾನ” ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.