ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಶಾಸಕರ ಆಯ್ಕೆಯೇ ಅಂತಿಮ.. ಏನಿದು ರಾಯರೆಡ್ಡಿ ಮಾತಿನ ಮರ್ಮ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಆಪ್ತರಿಂದ ಶಾಂತಿ-ಕ್ರಾಂತಿ ಹೇಳಿಕೆ ರಾಜಕೀಯದಲ್ಲಿ ಹೊಸ ಕೋಲಾಹಲ ಸೃಷ್ಟಿಸಿದೆ. ‘ಸೆಪ್ಟೆಂಬರ್ ಕ್ರಾಂತಿʼ ಆಗುತ್ತೆ ಅಂತ ಕೆ.ಎನ್‌ ರಾಜಣ್ಣ ಹೇಳಿದ್ರೆ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಶಾಸಕರ ಆಯ್ಕೆಯೇ ಅಂತಿಮ ಎಂಬ ಸಂದೇಶವನ್ನ ಸಿಎಂ ಆಪ್ತರು ರವಾನಿಸಿದ್ದಾರೆ.

ಮುಖ್ಯಮಂತ್ರಿ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಕ್ರಾಂತಿ ಏನಿಲ್ಲ.‌ ಸಿಎಂ ಬದಲಾವಣೆಯಂತೂ ಆಗುವುದೇ ಇಲ್ಲ. ಸಿಎಂ ಅವರನ್ನ ಬದಲಾವಣೆ ಯಾರು ಮಾಡಬೇಕು.. ನಾವೇ ಅಲ್ವಾ? ನಾನೂ ಕೂಡ ಒಬ್ಬ ವೋಟರ್, ಸಿಎಂಗೆ ಈಗಲೂ ಬಹುಮತ ಇದೆ. ಸಿದ್ದರಾಮಯ್ಯಗೆ ಇರುವಷ್ಟು ಜನ ಬೆಂಬಲ ಯಾರಿಗೂ ಇಲ್ಲ ಎಂದು ಸಿಎಂ ಪರ ಬ್ಯಾಟ್ ಬಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!