ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮರನಾಥ ಯಾತ್ರೆ ವೇಳೆ ಎರಡು ದಿನಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಇದರಲ್ಲಿ ಎಂಟು ಯಾತ್ರಾರ್ಥಿಗಳು ಹಾಗೂ ಒಬ್ಬರು ಐಟಿಬಿಪಿ ಸಿಬ್ಬಂದಿ ಇದ್ದಾರೆ. ಮೃತರ ವಿವರ ಹಾಗೂ ಸಾವಿನ ಕಾರಣ ಈವರೆಗೂ ತಿಳಿದುಬಂದಿಲ್ಲ. ಪರ್ವತದಲ್ಲಿ ಆಮ್ಲಜನಕ ಸಾಂದ್ರತೆಯಿಂದ ಹೃದಯಸ್ತಂಭನದಿಂದಾಗಿ ಯಾತ್ರಾತ್ರಿಗಳು ಮೃತಪಟ್ಟಿರಬಹುದು ಎನ್ನಲಾಗಿದೆ.