ಹೊಸದಿಗಂತ ವರದಿ, ಮಂಗಳೂರು:
ಆರೆಸ್ಸೆಸ್ನ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ ಎಂ . ಸೋಮಶೇಖರ್ ಭಟ್ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಕಂಬನಿ ಮಿಡಿದಿದ್ದಾರೆ.
ರಾಷ್ಟ್ರ ನಿಷ್ಠೆ ಮತ್ತು ರಾಮ ನಿಷ್ಠೆ ಅನುಪಮವಾದುದು. ರಾಜಕಾರಣದಲ್ಲಿ ನಿಷ್ಠೆ ಪ್ರಾಮಾಣಿಕತೆಯ ಮೌಲ್ಯವನ್ನು ಪ್ರತಿನಿಧಿಸಿದವರು. ಸಂಘದ ತತ್ವಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು . ಅವರ ಆತ್ಮಕ್ಕೆ ಸದ್ಗತಿಯನ್ನು ಅಯೋಧ್ಯೆ ರಾಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ತೀವ್ರ ಸಂತಾಪ ಸೂಚಿಸಿದ್ದಾರೆ.