ಕೆಲವರು ಮತ ನೀಡುತ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ: ಸಂಜಯ್ ರಾವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್‌ ಕಂಗನಾ ರಣಾವತ್​​​ಗೆ ಕಪಾಳಮೋಕ್ಷ ಮಾಡಿದ ಪ್ರಕರಣ ಕುರಿತು ಶಿವಸೇನಾ (UBT) ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.

ಕೆಲವರು ಮತ ನೀಡ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ಅಸಲಿಗೆ ಏನಾಯಿತೋ ಗೊತ್ತಿಲ್ಲ. ಅಮ್ಮ ಕೂಡ ಕುಳಿತಿದ್ದರು ಎಂದು ಕಾನ್ ಸ್ಟೇಬಲ್ ಹೇಳಿದ್ದರೆ ನಿಜ. ರೈತರ ಆಂದೋಲನದಲ್ಲಿ ಅವರ ತಾಯಿ ಭಾಗವಹಿಸಿದ್ದು, ಯಾರಾದರೂ ಅವರ ಬಗ್ಗೆ ಮಾತನಾಡಿದರೆ ಕೋಪ ಬರದೇ ಇರುತ್ತದೆಯೇ ಎಂದು ರಾವತ್ ಹೇಳಿದ್ದಾರೆ.

ರೈತರ ಆಂದೋಲನದಲ್ಲಿ ಭಾರತದ ಪುತ್ರರು ಮತ್ತು ಹೆಣ್ಣುಮಕ್ಕಳಾಗಿದ್ದರು. ಯಾರಾದರೂ ಭಾರತ ಮಾತೆಯನ್ನು ಅವಮಾನಿಸಿದರೆ ಮತ್ತು ಅದರಿಂದ ಯಾರಾದರೂ ಮನನೊಂದಿದ್ದರೆ ಅದು ಯೋಚಿಸಬೇಕಾದ ವಿಷಯ. ಕಂಗನಾ ಬಗ್ಗೆ ನನಗೆ ಸಹಾನುಭೂತಿ ಇದೆ. ಈಗ ಸಂಸದೆ. ಸಂಸದರ ಮೇಲೆ ದಾಳಿ ಮಾಡಬಾರದು. ಆದರೆ ರೈತರನ್ನೂ ಗೌರವಿಸಬೇಕು ಎಂದು ರಾವತ್ ಹೇಳಿದ್ದಾರೆ.

ಗುರುವಾರ, ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಸಂಸದರಾಗಿ ಚುನಾಯಿತರಾಗಿರುವ ಕಂಗನಾ ರಣಾವತ್ ಅವರಿಗೆ ಭದ್ರತಾ ತಪಾಸಣೆಯ ವೇಳೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

  1. ನಾಳೆ ನಿಮ್ಮ ಕಪಾಳದ ಮೇಲೂ ಕೂಡಾ ಬೀಳಬಹುದು.. ಸಮರ್ಥಿಸುವ ಕೆಲಸ ಬೇಡ, ಹುಷಾರಾಗಿರೀ…

LEAVE A REPLY

Please enter your comment!
Please enter your name here

error: Content is protected !!