Tuesday, September 9, 2025

ಶಿಕ್ಷಕರ ಆರೋಗ್ಯ ರಕ್ಷಣೆಗೆ ವಿಶೇಷ ಕ್ರಮ: ಮಣಿಪಾಲ ಆಸ್ಪತ್ರೆಯಿಂದ ಶಿಕ್ಷಕರ ದಿನಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನಕಪುರ ರಸ್ತೆಯಲ್ಲಿನ ಮಣಿಪಾಲ ಆಸ್ಪತ್ರೆ ಯು ಶಿಕ್ಷಕರ ದಿನಾಚರಣೆಯನ್ನು ಅನನ್ಯವಾಗಿ ಆಚರಿಸಿದೆ.
ನಗರದ ಪ್ರತಿಷ್ಠಿತ ಆರ್‌ಎಂಎಸ್ ಇಂಟರ್‌ನ್ಯಾಷನಲ್ ಸ್ಕೂಲ್, ಶ್ರೀ ಕುಮಾರನ್ ಪಬ್ಲಿಕ್ ಸ್ಕೂಲ್, ದೆಹಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಸೌತ್, ಇನ್ಸೈಟ್ ಅಕಾಡೆಮಿ ಸ್ಕೂಲ್ ಬೆಂಗಳೂರು ಮತ್ತು ಚೈತನ್ಯ ಶಾಲೆಗಳ ಸಹಯೋಗದೊಂದಿಗೆ, ಶಿಕ್ಷಿತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿರುವ ಶಿಕ್ಷಕರಿಗೆ ವಿಶಷ್ಟ ಆರೋಗ್ಯ ರಕ್ಷಣಾ ಕಾರ್ಯಕ್ರಮದ ಮೂಲಕ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದೆ.

ಕಾರ್ಯಕ್ರಮದಲ್ಲಿ ಶಿಕ್ಷಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ವಿಶೇಷವಾಗಿ ರಚಿಸಲಾದ ಗುರು ರಕ್ಷಾ, ಗುರು ಶಕ್ತಿ ಮತ್ತು ಗುರು ಸುರಕ್ಷಾ ಪ್ಯಾಕೇಜ್‌ಗಳ ಅಡಿಯಲ್ಲಿ ಶಿಕ್ಷಕರಿಗೆ ಉಚಿತ ಆರೋಗ್ಯ ವೋಚರ್‌ಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವು ಶಿಕ್ಷಕರು, ವೈದ್ಯರು ಮತ್ತು ಶಾಲಾ ನಾಯಕರನ್ನು ಒಟ್ಟುಗೂಡಿಸಿತು. ಭವಿಷ್ಯದ ಪೀಳಿಗೆಯನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಡುವವರ ಆರೋಗ್ಯ ರಕ್ಷಣೆಯು ಈ ಉಪಕ್ರಮದ ಮುಖ್ಯ ಧ್ಯೇಯವಾಗಿದೆ.

ಹೆಚ್ಚಿನ ಸಂಖ್ಯೆಯ ಶಿಕ್ಷಕರಲ್ಲಿ ದೀರ್ಘಕಾಲದ ಬೆನ್ನು ಮತ್ತು ಕುತ್ತಿಗೆ ನೋವು, ಕೀಲು ಸಮಸ್ಯೆಗಳು, ಧ್ವನಿ ಒತ್ತಡ, ಕಣ್ಣಿನ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಒತ್ತಡ (ಸ್ಟ್ರೆಸ್)-ಸಂಬಂಧಿತ ಅಸ್ವಸ್ಥತೆಗಳು ಸಾಮಾನ್ಯವಾಗಿವೆ. ಈ ಆರೋಗ್ಯ ಸವಾಲುಗಳು ವ್ಯಾಪಕವಾಗಿದ್ದರೂ, ಇವುಗಳುಗೆ ಸರಿಯಾದ ಗಮನವನ್ನು ನೀಡುವುದು ತುಂಬಾ ವಿರಳವಾಗಿದೆ. ಇದರಿಂದಾಗಿ ಶಿಕ್ಷಕರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಮಣಿಪಾಲ್ ಆಸ್ಪತ್ರೆಗಳು ಒದಗಿಸುವ ಈ ವಿಶಿಷ್ಟ ಆರೋಗ್ಯ ಪ್ಯಾಕೇಜ್‌ಗಳು ಹೃದಯದ ಅಪಾಯಗಳು, ಚಯಾಪಚಯ (ಮೆಟಾಬಾಲಿಕ್) ಪರಿಸ್ಥಿತಿಗಳು, ನಾಳೀಯ (ವಾಸ್ಕ್ಯುಲರ್) ಆರೋಗ್ಯ ಮತ್ತು ಮಹಿಳೆಯರ ಯೋಗಕ್ಷೇಮಕ್ಕಾಗಿ ತಪಾಸಣೆಗಳನ್ನು ನೀಡುತ್ತವೆ, ಅವರ ಅಗತ್ಯಗಳಿಗೆ ಅನುಗುಣವಾಗಿ ಸಮಗ್ರ ಆರೈಕೆಯ ವಿಧಾನವನ್ನು ಖಚಿತಪಡಿಸುತ್ತವೆ.

ಕಾರ್ಯಕ್ರಮವು ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆಯ ಪ್ರತಿಷ್ಠಿತ ವೈದ್ಯರಾದ, ಡಾ. ರಾಧಾ ಎಸ್ ರಾವ್, ಕನ್ಸಲ್ಟೆಂಟ್ – ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಮತ್ತು ಡಾ. ಭವ್ಯಾ ಎನ್‌, ಕನ್ಸಲ್ಟೆಂಟ್ – ಇಂಟರ್ನಲ್ ಮೆಡಿಸಿನ್, ಅವರಿಂದ ಮಹಿಳೆಯರ ಆರೋಗ್ಯ ಸಮಸ್ಯೆಗಳು, ಜೀವನಶೈಲಿ ಕಾಯಿಲೆಗಳು ಮತ್ತು ಶಿಕ್ಷಕರು ತಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬಹುದಾದ ಪ್ರಾಯೋಗಿಕ ಕ್ರಮಗಳ ಬಗ್ಗೆ ಮಾಹಿತಿಯುಕ್ತ ಭಾಷಣಗಳನ್ನು ಒಳಗೊಂಡಿತ್ತು. ಅನೇಕ ಶಿಕ್ಷಕರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಈ ಉಪಕ್ರಮವು ಅವರ ಆರೋಗ್ಯವೂ ಮುಖ್ಯವಾಗಿದೆ ಎಂಬ ಸಕಾಲಿಕ ಜ್ಞಾಪನೆಯಾಗಿದೆ ಎಂದು ಕರೆದರು.

ಶಿಕ್ಷಕರ ದಿನಾಚರಣೆಯನ್ನು ಈ ವಿಶಿಷ್ಟ ರೀತಿಯಲ್ಲಿಆಚರಿಸುವ ಮೂಲಕ ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆ, ಸಮಾಜದ ಮೂಲಾಧಾರವಾದ ಶಿಕ್ಷಕರನ್ನು ಆರೈಕೆಯ ಕೇಂದ್ರಬಿಂದುವಾಗಿ ಇರಿಸಿ, ಸಮುದಾಯ ಆರೋಗ್ಯದ ಬಗೆಗಿನ ತಮ್ಮ ಬದ್ಧತೆಯನ್ನು ಬಲಪಡಿಸಿತು.

ಇದನ್ನೂ ಓದಿ