ಮಹಾದೇವ ದೇಗುಲದಲ್ಲಿ ಮೆಟ್ಟಿಲು ಬಾವಿ ಕುಸಿತ, 10 ಜನರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದೋರ್‌ನ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಮೆಟ್ಟಿಲು ಬಾವಿ ಕುಸಿದು ಬಿದ್ದು, 25 ಮಂದಿ ಬಾವಿಗೆ ಬಿದ್ದಿದ್ದಾರೆ.

ಇದೀಗ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, 10 ಮಂದಿಯನ್ನು ರಕ್ಷಿಸಲಾಗಿದೆ. ಪುರಾತನ ದೊಡ್ಡ ಬಾವಿ ಮೇಲೆ ಚಾವಣಿ ಹಾಕಿದ್ದರು. ಅದರ ಮೇಲೆ ಸಾಕಷ್ಟು ಜನ ಒಂದೇ ಬಾರಿಗೆ ನಿಂತ ಕಾರಣ ಚಾವಣಿ ಕುಸಿದು ಬಿದ್ದಿದ್ದು, ಅದರ ಮೇಲೆ ನಿಂತಿದ್ದ 25 ಜನ ಬಾವಿ ಒಳಗೆ ಬಿದ್ದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!