ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು. ಘಟನೆಯಿಂದ 8-10 ಕಾರುಗಳ ಗಾಜುಗಳು ಪುಡಿ ಪುಡಿಯಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ವರದಿಯಾಗಿದೆ.
ಸಂಜೀವ್ ಬಲ್ಯಾನ್ ಅವರು ಲೋಕಸಭೆ ಚುನಾವಣೆ ಹಿನ್ನೆಲೆ ಖತೌಲಿಯಲ್ಲಿನ ಮಡ್ಕರಿಂಪುರ ಗ್ರಾಮದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಗುಂಪೊಂದು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿತು. ನಂತರ ಸಚಿವರು ಹಾಗೂ ಅವರ ಜತೆಗಿದ್ದ ಕಾರುಗಳು ಅಲ್ಲಿಂದ ತೆರಳಲು ಮುಂದಾಗಿದ್ದಾರೆ ಆಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಸಂಘರ್ಷ ತಾರಕಕ್ಕೇರದಂತೆ ಮುಂಜಾಗ್ರತಾ ಕ್ರಮವಾಗಿ ಸಂಸದ ಸಂಜೀವ್ ಬಲ್ಯಾನ್ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಈ ನಿಟ್ಟಿನಲ್ಲಿ ಕೆಲವರು ರ್ಯಾಲಿಯಲ್ಲಿ ಸಮಾಜ ವಿರೋಧಿ ಘೋಷಣೆಗಳನ್ನು ಕೂಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಜಾಫರ್ ನಗರ ಎಸ್ಪಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.
UP : मुजफ्फरनगर में केंद्रीय मंत्री, BJP सांसद एवं मौजूदा प्रत्याशी संजीव बालियान के काफिले पर पथराव। वे एक जनसभा कर रहे थे और 8–10 गाड़ियां खड़ी हुई थीं, जिनके शीशे टूटे हैं। पुलिस फोर्स मौके पर मौजूद है। pic.twitter.com/f1tCGTdMtz
— Sachin Gupta (@SachinGuptaUP) March 30, 2024