ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ AIADMK ಮಾಜಿ ಸಚಿವ ಜಯಕುಮಾರ್ ಎತ್ತಿನ ಬಂಡಿಯಲ್ಲಿ ಚನ್ನೈ ನಗರ ಸವಾರಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಮಾಜಿ ಮಂತ್ರಿಯ ವರ್ತನೆಗೆ ನೆಟ್ಟಿಗರು ಟೀಕೆ ಮಾಡಿದ್ದಾರೆ.
ಭಾನುವಾರ (ನವೆಂಬರ್ 5)ರಂದು ಮಾಜಿ ಸಚಿವ ಡಿ. ಜಯಕುಮಾರ್ ಚೆನ್ನೈ ನಗರದಲ್ಲಿ ಒಂಟೆತ್ತಿನ ಗಾಡಿ ಮೇಲೆ ಸಂಚರಿಸಿ ಸರ್ಕಾರವನ್ನು ಟೀಕಿಸಿದರು. ಅಧಿಕಾರಕ್ಕೆ ಬರುವ ಮುನ್ನ ಇಂಧನ ಬೆಲೆಯಲ್ಲಿ ರಿಯಾಯಿತಿ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದು ಆ ಬಗ್ಗೆ ಗಮನ ಹರಿಸಿಲ್ಲ ಎಂದು ಎತ್ತಿನ ಗಾಡಿ ಮೇಲೆ ಸಂಚರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿಮ್ಮ ಪ್ರತಿಭಟನೆಗೆ ಧ್ವನಿ ನೀಡಲು ಮೂಕ ಪ್ರಾಣಿಗ್ಯಾಕೆ ಹಿಂಸೆ ಕೊಡುತಿದ್ದೀರಿ? ಪ್ರತಿಭಟನೆ ನಡೆಸಲು ಬೇರೆ ಯಾವ ರೀತಿಯೂ ದಾರಿ ಸಿಗಲಿಲ್ವ? ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಷ್ಟೆಲ್ಲಾ ನಾಟಕ ಬೇಕಾ? ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದರು.
#WATCH | Chennai: AIADMK Senior leader and former Tamil Nadu Minister D Jayakumar rode a bullock cart in Vannarapettai, to condemn the DMK government's delay in fulfilling poll promise to give fuel subsidy. (05.11)
(Video Source: D Jayakumar office) pic.twitter.com/nVRit8xVEs
— ANI (@ANI) November 5, 2023