10 ಮಸೂದೆ ವಾಪಸ್​ ಕಳುಹಿಸಿದ ತಮಿಳುನಾಡು ರಾಜ್ಯಪಾಲ ಆರ್​​ಎನ್​​ ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳಿಗೆ ತಮಿಳುನಾಡು ರಾಜ್ಯಪಾಲರು ಅಂಕಿತ ಹಾಕದೇ ಬಾಕಿ ಉಳಿಸಿಕೊಳ್ಳುವುದರ ವಿರುದ್ಧ ಸುಪ್ರೀಂಕೋರ್ಟ್​ ಇತ್ತೀಚೆಗೆ ಚಾಟಿ ಬೀಸಿದ್ದು, ಇದೀಗ ರಾಜ್ಯಪಾಲ ರವಿ ಅವರು ಹತ್ತು ಮಸೂದೆಗಳಲ್ಲಿ ಹಿಂದಿರುಗಿಸಿದ್ದಾರೆ.

ತಮಿಳುನಾಡು ಸರ್ಕಾರ ರಾಜ್ಯಪಾಲರ ವಿಳಂಬ ಧೋರಣೆ ಪ್ರಶ್ನಿಸಿ, ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್​ ಅಭಿವೃದ್ಧಿ ಮಸೂದೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ರಾಜ್ಯಪಾಲರ ನಡೆಯನ್ನೂ ಟೀಕಿಸಿತ್ತು. ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಏಕೆ ತಡೆಹಿಡಿಯುತ್ತಾರೆ ಎಂದು ಕೇಳಿತ್ತು.

ಸುಪ್ರೀಂಕೋರ್ಟ್​ ಕಳವಳದ ಬಳಿಕ ರಾಜ್ಯಪಾಲ ಆರ್.ಎನ್.ರವಿ ಅವರು ಹತ್ತು ಮಸೂದೆಗಳಲ್ಲಿ ಹಿಂದಿರುಗಿಸಿದ್ದಾರೆ. ಇದರಲ್ಲಿ ಈ ಹಿಂದಿನ ಎಐಎಡಿಎಂಕೆ ಸರ್ಕಾರ ಅಂಗೀಕರಿಸಿದ್ದ ಎರಡು ಮಸೂದೆಗಳೂ ಇದರಲ್ಲಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಸ್ಪೀಕರ್ ಎಂ.ಅಪ್ಪಾವು ಅವರು ಶನಿವಾರ (ನವೆಂಬರ್​​ 18) ವಿಶೇಷ ಅಧಿವೇಶನ ಕರೆದಿದ್ದಾರೆ. ಇದರಲ್ಲಿ ಡಿಎಂಕೆ ಸರ್ಕಾರ ವಾಪಸ್​ ಬಂದ ಮಸೂದೆಗಳನ್ನು ಮತ್ತೊಮ್ಮೆ ಅಂಗೀಕರಿಸಿ, ಪುನಃ ರಾಜ್ಯಪಾಲರಿಂದ ಅನುಮೋದನೆಗೆ ಕಳುಹಿಸುವ ನಿರೀಕ್ಷೆ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!