ಟಂಟಂ ಗಾಡಿ ಪಲ್ಟಿ: ಪ್ರಯಾಣಿಕ ಸ್ಥಳದಲ್ಲೇ ಸಾವು

ಹೊಸದಿಗಂತ ವರದಿ, ವಿಜಯಪುರ:

ಟಂಟಂ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಸೋಮವಾರ ನಡೆದಿದೆ.

ಮೃತಪಟ್ಟವನನ್ನು ಇಂಗಳೇಶ್ವರ ತಾಂಡಾ ನಿವಾಸಿ ಸುಬ್ಬು ಅಣಪ್ಪ ಲಮಾಣಿ (55) ಎಂದು ಗುರುತಿಸಲಾಗಿದೆ.

ಬಸವನಬಾಗೇವಾಡಿಯಿಂದ ದೇವರಹಿಪ್ಪರಗಿ ಕಡೆ ಚಲಿಸುತ್ತಿದ್ದ ಟಂಟಂನಲ್ಲಿ ಸುಬ್ಬು ಲಮಾಣಿ ಸೇರಿದಂತೆ 6 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದ್ದು, ಸುಬ್ಬು ಲಮಾಣಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದ್ದು, ಇತರೆ ಪ್ರಯಾಣಿಕರು ಸಣ್ಣ, ಪುಟ್ಟ ಗಾಯಗೊಂಡಿದ್ದಾರೆ.

ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!