ಕರ್ನಾಟಕ ಕಾಂಗ್ರೆಸ್ ನಿಂದ ರವಾನೆಯಾದ ಹಣದಿಂದ ತೆಲಂಗಾಣದಲ್ಲಿ ʼಕೈʼ ಗೆದ್ದಿದೆ : ಕೆ.ಎಸ್. ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ :

ಕೋಮು ದ್ವೇಷ‌ ಮೂಡಿಸುವ ಜಮೀರ್ ಅಹಮ್ಮದ್‌‌ ಹೇಳಿಕೆ ಹಾಗೂ ಕರ್ನಾಟಕ ಕಾಂಗ್ರೆಸ್ ನಿಂದ ರವಾನೆಯಿಂದ ಅನಾಮಧೇಯ ಹಣದಿಂದ‌ ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಜಯವಾಗಿದೆ ಎಂದು ಮಾಜಿ‌ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಚುನಾವಣೆಯಲ್ಲಿ ಬಿಜೆಪಿ ತ್ರಿವಿಕ್ರಮ ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಮುಂದೆ‌ ಭಾನುವಾರ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಜಮೀರ್ ಅಹಮ್ಮದ್ ಮುಸಲ್ಮಾನರನ್ನು ಓಲೈಸಿ ಹಿಂದುಗಳ‌ ಬಗ್ಗೆ ದ್ವೇಷ ಬರುವಂತಹ ಹೇಳಿಕೆ ನೀಡಿದ್ದರು. ಅದಕ್ಕೆ -ಕರ್ನಾಟಕ ಸಭಾ‌ಪತಿ ಸ್ಥಾನವನ್ನೇ ಬಳಕೆ ಮಾಡಿಕೊಂಡಿದ್ದರು ಎಂದರು.

ತೆಲಂಗಾಣ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಅನಾಮಧೇಯ ಹಣ ಸಂಗ್ರಹ ಮಾಡಿ ಕೊಟ್ಟಿದ್ದರು. ಇದರ ಹೊರತಾಗಿಯೂ ಬಿಜೆಪಿ ಮೂರು‌ ರಾಜ್ಯಗಳಲ್ಲಿ ಬಹುಮತ ಪಡೆದಿದೆ. ಇದು ಮೋದಿಯವರ ಜನಪ್ರಿಯತೆ ಹಾಗೂ ಮತ್ತೊಮ್ಮೆ ಪ್ರಧಾನಿಯಾಗುವ ಸಂದೇಶವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!