ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪಿಎಸ್ಐನ ಹೊಡೆತಕ್ಕೆ ಮನೆ ಬಾಡಿಗೆದಾರ ಶಾಶ್ವತವಾಗಿ ಕಿವುಡನಾಗಿರುವಂತಹ ಘಟನೆಯೊಂದು ನಡೆದಿದೆ.
ಬೇಗೂರು ಪೊಲೀಸ್ ಠಾಣೆ PSI ಪುನೀತ್ನಿಂದ ಬಾಡಿಗೆದಾರ ಉದಯ ಕುಮಾರ್(26) ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇಬ್ಬರು ಮನೆ ಮಾಲೀಕರ ನಡುವಿನ ಜಗಳದಲ್ಲಿ ಬಾಡಿಗೆದಾರ ಬಲಿಪಶುವಾಗಿದ್ದು, ಸದ್ಯ ಘಟನೆ ಸಂಬಂಧ ಉದಯ ಕುಮಾರ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬೇಗೂರು ಪೊಲೀಸ್ ಠಾಣೆ ಪಿಎಸ್ಐ ಪುನೀತ್ ಅನವಶ್ಯಕವಾಗಿ ಠಾಣೆಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಲಿನಿಂದ ಒದ್ದು, ಕೈಯಿಂದ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ಇದರಿಂದ ಉದಯಗೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಗೊತ್ತಾಗಿದೆ. ಸದ್ಯ ಉದಯ ಪರ ವಕೀಲರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.