ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಭಾರತದ ಬೃಹತ್ ಮೊತ್ತದೊಂದಿಗೆ ಆರಂಭವಾದ ಪಂದ್ಯ ಕೊನೆಯ ದಿನದಲ್ಲಿ ಇಂಗ್ಲೆಂಡ್ ಜಯದತ್ತ ಮುಖ ಮಾಡಿತು. 371 ರನ್ಗಳ ಗುರಿಯನ್ನು ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ ಬೆನ್ನಟ್ಟುತ್ತಾ ಅರ್ಧ ಗಂಟೆ ಮುನ್ನ ಮುಕ್ತಾಯಗೊಳಿಸಿತು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ಗಳನ್ನು ದಾಖಲಿಸಿ ಆಲೌಟ್ ಆಯ್ತು. ಇಂಗ್ಲೆಂಡ್ ಕೂಡಾ ತೀವ್ರ ಪೈಪೋಟಿಯೊಂದಿಗೆ 465 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 364 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಸೋಲಿಗೆ ಪ್ರಮುಖ ಕಾರಣವೆಂದರೆ ಕಳಪೆ ಫೀಲ್ಡಿಂಗ್ ಮತ್ತು ನಿರೀಕ್ಷೆಗಿಂತ ಕಳಪೆ ಮಟ್ಟದ ಬೌಲಿಂಗ್ ಪ್ರದರ್ಶನ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದ ಬೌಲರ್ಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್ ಎಷ್ಟೇ ಒತ್ತಡದ ಸಂದರ್ಭದಲ್ಲಿದ್ದರೂ ರನ್ಗಳನ್ನು ಎಳೆದಾಡುವಲ್ಲಿ ವಿಫಲರಾದರು. ಬುಮ್ರಾ ಸಹಜವಾಗಿ ಕಠಿಣ ಶ್ರಮ ಹಾಕಿದರೂ, ಅವರಿಗೆ ಉಳಿದವರಿಂದ ಬೆಂಬಲ ಸಿಕ್ಕಿಲ್ಲ.
ಟೀಂ ಇಂಡಿಯಾ ಮಾಜಿ ವೇಗಿ ಶಮಿ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಾ, “ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಗಂಭೀರವಾಗಿ ಕೆಲಸ ಮಾಡಬೇಕಿದೆ. ಲೀಡ್ ಪಡೆಯಬೇಕಾಗಿದ್ದ ಭಾಗದಲ್ಲಿ ನಿಖರತೆಯ ಕೊರತೆಯಿಂದ ಮ್ಯಾಚ್ ಕೈ ತಪ್ಪಿದೆ. ಬುಮ್ರಾ ತೀವ್ರ ಶ್ರಮಿಸಿದ್ದರೂ ತಂಡದಲ್ಲಿ ಅವರಿಗೆ ಬೇಕಾದ ಬೆಂಬಲ ಸಿಗಲಿಲ್ಲ,” ಎಂದು ಅಭಿಪ್ರಾಯಪಟ್ಟರು.
ಇನ್ನೊಂದು ಮಹತ್ವದ ಬೆಳವಣಿಗಿಯಾಗಿ, ಬುಮ್ರಾ ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಡದಿರೋ ಸಾಧ್ಯತೆ ಹೆಚ್ಚು. ಅವರ ಮೇಲೆ ಕೆಲಸದ ಒತ್ತಡ ಕಡಿಮೆ ಮಾಡಲೆಂದು ಈ ಟೆಸ್ಟ್ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಅವರು ಆಟವಾಡುವುದಾಗಿ ವರದಿಯಾಗಿದೆ. ಅವರ ಸ್ಥಾನದಲ್ಲಿ ಆಕಾಶ್ ದೀಪ್ ಅಥವಾ ಅರ್ಷದೀಪ್ ಸಿಂಗ್ ಪಾಲಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.