ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ಪಕ್ಷವು ಈ ಬಾರಿಯು ಗ್ಯಾರಂಟಿ ಮೊರೆ ಹೋಗಿದೆ.
ದೆಹಲಿ ಜನತೆಗೆ ಕಾಂಗ್ರೆಸ್ ಐದು ಗ್ರಾರೆಂಟಿ ಯೋಜನೆಗಳನ್ನು ಘೋಷಿಸಲು ಸಿದ್ದವಾಗಿದ್ದು, ಮಹಿಳಾ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಈ ಯೋಜನೆಗಳನ್ನು ರೂಪಿಸಿದೆ ಎನ್ನಲಾಗಿದೆ.
ಐದು ಗ್ಯಾರಂಟಿ ಯೋಜನೆಗಳು
1.ಮಹಿಳೆಯರಿಗೆ ನೇರ ನಗದು ವರ್ಗಾವಣೆ: ಮಹಿಳಾ ಮತದಾರರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನೇರ ನಗದು ವರ್ಗಾವಣೆ ಯೋಜನೆಯನ್ನು ಪರಿಚಯಿಸಲು ಯೋಜಿಸಿದೆ ಎನ್ನಲಾಗಿದೆ.
2.ಇನ್ಷ್ಯೂರೆನ್ಸ್: ಕೇಂದ್ರಾಡಳಿತ ಪ್ರದೇಶದ ಎಲ್ಲ ನಾಗರಿಕರಿಗೂ 20 ರಿಂದ 25 ಲಕ್ಷ ಮೊತ್ತದ ಹೆಲ್ತ್ ಇನ್ಷ್ಯೂರೆನ್ಸ್ ಪ್ಲಾನ್ ಮಾಡಿದೆ.
3.ನಿರುದ್ಯೊಗಿಗಳಿಗೆ ಧನ ಸಹಾಯ: ಕರ್ನಾಟಕದ ಯುವನಿಧಿ ಕಾರ್ಯಕ್ರಮದಂತೆ ದೆಹಲಿಯಲ್ಲಿಯೂ ಸಹ ನಿರುದ್ಯೊಗಿ ಯವಕ – ಯುವತಿಯರಿಗೆ ಧನ ಸಹಾಯದ ಜೊತೆಗೆ ತರಬೇತಿ ಕಾರ್ಯಕ್ರಮವನ್ನು ಸಹ ಯೋಜಿಸಿದೆ ಎನ್ನಲಾಗಿದೆ.
4.ಉಚಿತ ವಿದ್ಯುತ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಂತೆ ದೆಹಲಿಯ ನಿವಾಸಿಗಳಿಗೂ 400 ವ್ಯಾಟ್ ತನಕ ಉಚಿತ ವಿದ್ಯುತ್ ಅನ್ನು ಘೋಷಿಸಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ಸರ್ಕಾರ ರಚಿಸಿದ ನಂತರ ವಿದ್ಯತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನಮಾಡುವುದಾಗಿ ಘೋಷಿಸಿದರು.
5.ಉಚಿತ ರೇಷನ್: ದೆಹಲಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ವಿಶೇಷವಾದ ರೇಷನ್ ನೀಡಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಇದರಲ್ಲಿ ಅಕ್ಕಿ, ಅಡುಗೆ ಎಣ್ಣೆ ಹಾಗೂ ಇತರೆ ದೈನಂದಿನ ವಸ್ತುಗಳು ಇರಲಿವೆ ಎನ್ನಲಾಗಿದೆ.
ದೆಹಲಿಯಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ರೂಪಿಸರುವ ಕಾಂಗ್ರೆಸ್ ಕರ್ನಾಟಕ ಹಾಗೂ ತೆಲಂಗಾಣದಲ್ಲಿಯೂ ಇದೇ ತರಹದ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಗೆಲುವು ಸಾಧಿಸಿತ್ತು. ಆದರೆ ಕಳೆದ ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ತರಹದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು ಸಹ ಅವುಗಳು ಕೈಹಿಡಿಯಲಿಲ್ಲ. ಇನ್ನು ಸೊಮವಾರದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಈ ಗ್ಯಾರಂಟೆ ಯೋಜನೆಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.