ವಾಯನಾಡು ಭೂಕುಸಿತದ ಭೀಕರತೆ.. ಕುಳಿತ ಸ್ಥಿತಿಯಲ್ಲೇ ಸಿಕ್ಕ ಶವಗಳು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಯನಾಡು ಭೂಕುಸಿತ ಭೀಕರವಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಮಣ್ಣಿನಲ್ಲಿ ಮೃತದೇಹಗಳು ಕಂಡುಬಂದಿವೆ. ಮಲಗಿರುವ, ಕುಳಿತಿರುವ ಭಂಗಿಯಲ್ಲೇ ಮೃತದೇಹಗಳು ಪತ್ತೆಯಾಗಿವೆ.

ರಕ್ಷಕರು ಅನೇಕ ಒಳನಾಡಿನ ಪ್ರದೇಶಗಳನ್ನು ತಲುಪಲು ಅಸಾಧ್ಯವಾಗಿದ್ದು ಅವು ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ  ಸ್ಥಳೀಯರು ಛಾವಣಿ ತೆಗೆದು ಮನೆಯೊಳಕ್ಕೆ ಹೋಗಿದ್ದು, ಕುರ್ಚಿಗಳ ಮೇಲೆ ಕುಳಿತುಕೊಂಡ ಮತ್ತು ಮಂಚಗಳ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮಣ್ಣಿನಿಂದ ಆವೃತವಾದ ದೇಹಗಳು ಸಿಕ್ಕಿವೆ.

ಅಧಿಕಾರಿಗಳು ಈ ಬಗ್ಗೆ ಅಧಿಕೃತವಾಗಿ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಇದುವರೆಗೆ ಕನಿಷ್ಠ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮತ್ತು 186 ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಿಲುಕಿರುವ ಶಂಕಿತ ಜನರನ್ನು ಪತ್ತೆಹಚ್ಚಲು ವಿವಿಧ ರಕ್ಷಣಾ ಸಂಸ್ಥೆಗಳು ಇಂದು ಮುಂಜಾನೆ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!