ಏಕಾಏಕಿ ವರಸೆ ಬದಲಾಯಿಸಿಬಿಟ್ಟ ಇಸ್ರೇಲ್ ಪ್ರಧಾನಿ.. ಭಾರತಕ್ಕೆ ಸಾಥ್ ಕೊಟ್ಟ ನೆತನ್ಯಾಹು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪದಕರ ಭೀಕರ ದಾಳಿಯನ್ನು ಖಂಡಿಸಿ ಭಾರತದ ಮಿತ್ರ ರಾಷ್ಟ್ರಗಳು ಬೆಂಬಲ ಘೋಷಿಸುತ್ತಿವೆ. ಅಷ್ಟೇ ಅಲ್ಲದೆ ಕಾಶ್ಮೀರವನ್ನು ಒಂದು ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ; ಆದ ಕಾರಣ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ರಾಷ್ಟ್ರಗಳು ಸಹ ಇಂದು ಭಾರತದ ಪರವಾಗಿ ನಿಲುವು ತಾಳುತ್ತಿದೆ.

ಹೌದು! ಹಿಂದೊಮ್ಮೆ ಕಾಶ್ಮೀರವನ್ನ ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ ಎಂದಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಭಾರತದ ಮೇಲಿನ ಭಯೋತ್ಪದಕರ ಭೀಕರ ದಾಳಿಯನ್ನು ಕಟುವಾಗಿ ಖಂಡಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಭಾರತದ ಜನರೊಂದಿಗೆ ಹೆಗಲಿಗೆ ಹೆಗಲು ನೀಡುವುದಾಗಿ ಹೇಳಿದ್ದಾರೆ.

ಇನ್ನೊಂದೆಡೆ, ಜಪಾನ್‌ನ ಪ್ರಧಾನಿ ಶಿಗೆರುಶಿಬಾ ಅವರು ಮೋದಿ ಅವರಿಗೆ ಕರೆ ಮಾಡಿ, ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವಹಾನಿಗೆ ತಮ್ಮ ತೀವ್ರ ಸಂತಾಪ ಸೂಚಿಸಿದರು. ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮೋದಿಗೆ ಕರೆ ಮಾಡಿ ಮಾತನಾಡಿದ, ಜೋರ್ಡಾನ್ ರಾಜ ರಾಜ ಅಬ್ದುಲ್ಲಾII ಅವರು, ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು. ಮುಗ್ಧ ಜೀವಗಳ ನಷ್ಟಕ್ಕೆ ಅವರು ಪ್ರಾಮಾಣಿಕ ಸಂತಾಪ ಸೂಚಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!