ಆಗಸ್ಟ್​ ತಿಂಗಳೆಂದರೆ ಕ್ರಾಂತಿಕಾರಿ: ಕೈಮಗ್ಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಭಾರತ್​ ಮಂಟಪ​(ಪ್ರಗತಿ ಮೈದಾನ)ದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಭಾರತೀಯ ವಸ್ತ್ರ ಏವಂ ಶಿಲ್ಪಾ ಕೋಶ್​ ಜವಳಿ ಮತ್ತು ಕರಕುಶಲಗಳ ಭಂಡಾರ ಇ ಪೋರರ್ಟಲ್​ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ಈ ವೇಳೆ ನೇಕಾರರೊಂದಿಗೆ ಸಂವಾದ ನಡೆಸಿದ ಅವರು,ಆಗಸ್ಟ್​ ತಿಂಗಳನ್ನೂ ನಾನು ಕ್ರಾಂತಿಕಾರಿ ಎಂದು ಬಣ್ಣಿಸಲು ಇಷ್ಟಪಡುತ್ತೇನೆ. ಏಕೆಂದರೆ ಸ್ವದೇಶಿ ಅಂದೋಲನ ಹಾಗೂ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರತಿ ಒಂದು ತ್ಯಾಗವನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ. ಸ್ವದೇಶಿ ಅಂದೋಲನವು ಕೇವಲ ವಿದೇಶಿ ಬಟ್ಟೆಗಳನ್ನೂ ಬಹಿಷ್ಕರಿಸಲು ಸೀಮಿತವಾಗಿರಲಿಲ್ಲ. ಭಾರತದ ಸ್ವತಂತ್ರ ಆರ್ಥಿಕತೆಗೆ ಸ್ಫೂರ್ತಿದಾಯಕವಾಗಿತ್ತು ಎಂದು ಬಣ್ಣಿಸಿದ್ದಾರೆ.

​ ಫಾರ್​ ಲೋಕಲ್​ ಅಭಿಯಾನದಡಿ ದೇಶದ ಜನತೆ ಸ್ವದೇಶಿ ಉತ್ಪನ್ನಗಳನ್ನೂ ಪೂರ್ಣ ಹೃದಯದಿಂದ ಖರೀದಿಸುತ್ತಿದ್ದಾರೆ. ಆತ್ಮನಿರ್ಭರ ಭಾರತದ ಕನಸುಗಳನ್ನೂ ಹೆಣೆಯುವವರು ಮತ್ತು ಮೇಕ್​ ಇನ್​ ಇಂಡಿಯಾಗೆ ಶಕ್ತಿಯನ್ನೂ ನೀಡುವವರು ಖಾದಿಯನ್ನೂ ಬಟ್ಟೆಯಾಗಿ ಅಲ್ಲ ಆಯುಧವನ್ನಾಗಿ ನೋಡುತ್ತಿದ್ದಾರೆ ಎಂದು ಹೇಳಿದ್ಧಾರೆ.

ದೇಶದ ಬೆಳವಣಿಗೆಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆ, ಹಳೆಯ ಹಾಗೂ ಹೊಸದರ ಸಂಗಮವೇ ಇಂದಿನ ಭಾರತವನ್ನೂ ವ್ಯಾಖ್ಯಾನಿಸುತ್ತದೆ. ಆಧುನಿಕ ಭಾರತದಲ್ಲಿ ವೋಕಲ್​ ಫಾರ್​ ಲೋಕಲ್​ ಅಭಿಯಾನವನ್ನೂ ಜಾಗತಿಕ ಮಟ್ಟದಲ್ಲಿ ಖ್ಯಾತಿಗೊಳಿಸಲಾಗುತ್ತಿದೆ.

ಸ್ವದೇಶಿ ಅಂದೋಲನವು ಭಾರತದ ನೇಕಾರರನ್ನೂ ದೇಶದ ಜನತೆಯೊಂದಿಗೆ ಬೆಸೆಯುವ ದೊಡ್ಡ ಕಾರ್ಯಕ್ರಮವಾಗಿತ್ತು. ಆಗಸ್ಟ್​ 7ರಂದು ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನಾಗಿ ಆಯ್ಕೆ ಮಾಡಲು ಸ್ವದೇಶಿ ಅಂದೋಲನ ದೊಡ್ಡ ಸ್ಪೂರ್ತಿ ನೀಡಿದೆ. ಸ್ವದೇಶಿ ಉಡುಪುಗಳ ಬಗ್ಗೆ ದೇಶದಲ್ಲಿ ಹೊಸ ಕ್ರಾಂತಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನೇಕಾರರ ಹಾಗೂ ಕೈಮಗ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.ಖಾದಿ ಬಟ್ಟೆಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಕಳೆದ 9 ವರ್ಷಗಳ ಅವಧಿಯಲ್ಲಿ 30 ಸಾವಿರ ಕೋಟಿ ರೂಪಾಯಿಯಿಂದ 1 ಲಕ್ಷ 30 ಸಾವಿರ ಕೋಟಿ ರೂಪಾಯಿಗೆ ವ್ಯಾಪಾರ ಮಹಿವಾಟು ಹೆಚ್ಚಳವಾಗಿದೆ. ಭಾರತದ ಕೈಮಗ್ಗ ಹಾಗೂ ಜವಳಿ ಉದ್ಯಮವನ್ನೂ ವಿಶ್ವಚಾಂಪಿಯನ್​ಶಿಪ್​ ಆಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.

ಇದೇ ವೇಳೆ ಏಕತಾ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ ದೇಶಾದ್ಯಂತ ಏಕತಾ ಮಾಲ್​ಗಳನ್ನೂ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!