April 4, 2026
Saturday, April 4, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಪರಾಕ್ರಮ: ಇರಾನ್ ನಿಂದ ಬಂತು ವಿಶೇಷ ಸಂದೇಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಭಾರತವು ದೈರ್ಯಶಾಲಿಯಾಗಿ ತನ್ನ ತೈಲ ಹೊತ್ತ ಹಡಗುಗಳನ್ನು ಹಾರ್ಮುಜ್ ಜಲಸಂಧಿ ಮೂಲಕ ದಾಟಿಸಿದ್ದು, ಈ ರಾಜತಂತ್ರದ ಯಶಸ್ಸನ್ನು ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.

ಇದೀಗ ಏಳನೇ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಭಾರತದ ಕಡೆ ಬರುತ್ತಿದ್ದು, ಈ ಮದ್ಯೆ ಇರಾನ್ ವಿಶೇಷ ಸಂದೇಶವನ್ನು ರವಾನಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿದ ಮುಂಬೈಯಲ್ಲಿರುವ ಇರಾನ್ ದೂತಾವಾಸ ಕಚೇರಿ ಪೋಸ್ಟ್ ಮಾಡಿದ್ದು , ಭಾರತ ಅದರಲ್ಲೂ ವಿಶೇಷವಾಗಿ ಗುಜರಾತ್ ಇತಿಹಾಸದಲ್ಲಿ ಅತೀ ಪ್ರೀತಿಪಾತ್ರ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ ಪೋಸ್ಟ್ ಮಾಡಿ, ಹಾರ್ಮುಜ್ ಜಲಸಂಧಿಯಲ್ಲಿನ ಭಾರತದ ಪರಾಕ್ರಮವನ್ನು ಭಾರತೀಯ ರಾಜತಾಂತ್ರಿಕತೆಯ ಜಯ ಎಂದು ಬಣ್ಣಿಸಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ದೂತಾವಾಸ ಕಚೇರಿಯು ಪ್ರತಿಕ್ರಿಯೆ ನೀಡುತ್ತಾ, ‘ಭಾರತ ವಿಶೇಷವಾಗಿ ಗುಜರಾತ್, ಇತಿಹಾಸದಲ್ಲಿ ಒಂದು ಪ್ರೀತಿಪಾತ್ರ ಸ್ಥಾನ ಹೊಂದಿದೆ. ಭಾರತ ಶತಮಾನಗಳ ಹಿಂದೆ ನಮ್ಮ ದೇಶದ ಜನರನ್ನು ಆತ್ಮೀಯವಾಗಿ ಸ್ವಾಗತಿಸಿತ್ತುʼ ಎಂದು ಹೇಳಿಕೊಂಡಿದೆ.

ಇರಾನ್ ಈ ಮಾತು , ಬಹುಶಃ ಗುಜರಾತ್‌ನ ಪ್ರಾಚೀನ ಬಂದರು ಲೋಥಲ್ ಕುರಿತು ಉಲ್ಲೇಖಿಸಿದ್ದು, ಸುಮಾರು 4,000 ವರ್ಷಗಳ ಹಿಂದೆ ಸಿಂಧೂ ಕಣಿವೆಯ ನಗರಗಳನ್ನು ಪರ್ಷಿಯನ್ ಕರಾವಳಿಯೊಂದಿಗೆ ಸಂಪರ್ಕಿಸುತ್ತಿತ್ತು . ಈ ಶಾಶ್ವತ ಬಂಧವನ್ನು ಆಧಾರವಾಗಿಸಿಕೊಂಡು, ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಇರಾನ್ ತಿಳಿಸಿದೆ.

ಎಲ್‌ಪಿಜಿ ಹೊತ್ತ ಆರು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಈಗಾಗಲೇ ದಾಟಿ ಭಾರತೀಯ ಬಂದರು ತಲುಪಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬರುವ ನಿರೀಕ್ಷೆಗಳಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !