ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೀರಾಂಗನ ಲಕ್ಷ್ಮೀಬಾಯಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ದೆಹಲಿಯಿಂದ ದಾಮೋಹ್ಗೆ ಗರ್ಭಿಣಿ ಮತ್ತು ಆಕೆಯ ಪತಿ ಸೋಮವಾರ ರಾತ್ರಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಯಾರೂ ಸಹಾಯ ಮಾಡಲು ಸಿದ್ಧರಿರಲಿಲ್ಲ. ಈ ವೇಳೆ ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಮಿರ್ಜಾ, ದಂಪತಿಯನ್ನು ನೋಡಿದ ತಕ್ಷಣ, ಅವರ ಟಿಕೆಟ್ನಲ್ಲಿ ಮುದ್ರಿಸಲಾದ ಪಿಎನ್ಆರ್ ಸಂಖ್ಯೆಯನ್ನು ನೀಡಿ ಸಹಾಯಕ್ಕಾಗಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಗೆ ರೈಲ್ವೆ ಸಚಿವಾಲಯ ಸ್ಪಂದಿಸಿದ್ದು, 20 ನಿಮಿಷಗಳ ನಂತರ ವೈದ್ಯರ ತಂಡವು ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಚಿಕಿತ್ಸೆ ನೀಡಿದೆ. ಗರ್ಭಿಣಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು .
ತಾಯಿ ಮತ್ತು ಗಂಡು ಮಗುವನ್ನು ಈಗ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಅವರ ತ್ವರಿತ ಪ್ರತಿಕ್ರಿಯೆಗಾಗಿ ದಂಪತಿ ಧನ್ಯವಾದಗಳನ್ನು ತಿಳಿಸಿದ್ದಾರೆ .
ಈ ಬಗ್ಗೆ ಮಾಧ್ಯಮದ ಜತೆಗೆ ಮಾತನಾಡಿದ ತನ್ವೀರ್,ರಾತ್ರಿ 11:30 ರ ಸುಮಾರಿಗೆ ಝಾನ್ಸಿಗೆ ಅವರು ಬಂದರು. ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್ಆರ್ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ.ತಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು.