ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಸೀರಿಯಲ್ ನಟಿ ಕೃಷ್ಣ ಮುಖರ್ಜಿ ಅವರು ನಿರ್ಮಾಪಕರ ವಿರುದ್ಧ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ನಿರ್ಮಾಪಕ ಕುಂದನ್ ಸಿಂಗ್ ಅವರು ನನ್ನನ್ನು ಮೇಕ್ಅಪ್ ರೂಮಿನಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದರು ಜೊತೆಗೆ ನಾನು ಡ್ರೆಸ್ ಚೇಂಜ್ ಮಾಡುವಾಗ ಬಾಗಿಲು ತೆಗೆದಿದ್ದರು ಎಂದು ಹೇಳಿದ್ದಾರೆ.
ಹಿಂದಿಯ ಜನಪ್ರಿಯ ಟಿವಿ ಶೋ ಯೇ ಹೈ ಮೊಹಬಾತೇನ್ನಲ್ಲಿ ಕೃಷ್ಣ ಮುಖರ್ಜಿ ಅವರು ಸಾಕಷ್ಟು ಹೆಸರುಗಳಿಸಿದ್ದಾರೆ. ತನ್ನ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಕೃಷ್ಣ ಮುಖರ್ಜಿ ಟಿವಿ ನಿರ್ಮಾಪಕರಾದ ಕುಂದನ್ ಸಿಂಗ್ ಸೇರಿದಂತೆ ಪ್ರೊಡಕ್ಷನ್ ಹೌಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ನಿರ್ಮಾಪಕ ಕುಂದನ್ ಸಿಂಗ್ ಜೊತೆಗೆ ಶುಭ್ ಶಗುನ್ ಎನ್ನುವ ಸೀರಿಯಲ್ನಲ್ಲಿ ನಟಿಸಿದ್ದೆ. ಅವರು ನನಗೆ ಕೊಡಬೇಕಾದ ಸಂಬಳವನ್ನು ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ನಾನು ಟಿವಿ ಶೋನಿಂದ ದೂರ ಉಳಿದುಕೊಂಡಿದ್ದೇನೆ. ಅವರು ನನಗೆ ಕಿರುಕುಳ ಕೊಟ್ಟ ಬಗ್ಗೆ ಇನ್ಸಾಸ್ಟಾಗ್ರಾಂನಲ್ಲಿ ಬರೆಯಲು ನನಗೆ ಈಗಲೂ ಕೈ ನಡುಗುತ್ತಾ ಇದೆ. ತುಂಬಾ ಧೈರ್ಯ ಮಾಡಿ ನಾನು ವಿಷಯವನ್ನು ತಿಳಿಸುತ್ತಿದ್ದೇನೆ.
ನಾನು ಹೆದರಿ ಸುಮ್ಮನೆ ಕೂರೋದಿಲ್ಲ. ಇದೇ ಕಾರಣಕ್ಕೆ ನಾನು ಇಷ್ಟು ದಿನ ಯಾವ ಸೀರಿಯಲ್ನಲ್ಲಿಯೂ ನಟಿಸೋಕೆ ಇಷ್ಟಪಟ್ಟಿರಲಿಲ್ಲ. ಆ ಅನುಭವ ನನ್ನನ್ನು ಖಿನ್ನತೆಗೆ ದೂಡಿದೆ ಎಂದು ಹೇಳಿಕೊಂಡಿದ್ದಾರೆ.
View this post on Instagram