ಕೊಡಗಿಗೆ ಪ್ರವಾಸಕ್ಕೆ ಬಂದ ಮೂವರು ನೀರು ಪಾಲು

ಹೊಸದಿಗಂತ ವರದಿ, ಮಡಿಕೇರಿ:

ಪ್ರವಾಸಕ್ಕೆಂದು‌ ಕೊಡಗಿಗೆ ಆಗಮಿಸಿದ್ದ ಮೂವರು ನೀರು ಪಾಲಾದ ಘಟನೆ ನಡೆದಿದೆ.
ಮೃತರನ್ನು ಮೂಲತಃ ತೆಲಂಗಾಣದವರೆಂದು ಗುರುತಿಸಲಾಗಿದ್ದು, ಪ್ರಾಥಮಿಕ ವರದಿಯನ್ವಯ 16,18ಮತ್ತು 36 ವರ್ಷದವರೆಂದು ಹೇಳಲಾಗಿದೆ.
ತೆಲಂಗಾಣದಿಂದ ಕೊಡಗಿಗೆ ಆಗಮಿಸಿದ್ದ ಪ್ರವಾಸಿಗರು ಕುಶಾಲನಗರದ ಹೋಂಸ್ಟೇಯೊಂದರಲ್ಲಿ ತಂಗಿದ್ದರೆನ್ನಲಾಗಿದ್ದು, ಭಾನುವಾರ ಟೆಂಪೋ ಟ್ರಾವೆಲರ್ ಒಂದರಲ್ಲಿ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ವೀಕ್ಷಣೆಗೆ ತೆರಳಿದ್ದರೆಂದು ಹೇಳಲಾಗಿದೆ.
ಈ ಸಂದರ್ಭ ತಂಡದಲ್ಲಿದ್ದ ಮೂವರು ನೀರು ಪಾಲಾಗಿರುವುದಾಗಿ ತಿಳಿದು ಬಂದಿದ್ದು, ಜೊತೆಗೆ ಬಂದಿದ್ದವರ ಆಕ್ರಂದನ‌ ಮುಗಿಲು ಮುಟ್ಟಿದೆ.
ಮುಳುಗು ತಜ್ಞರು ಹಾಗೂ ಪೊಲೀಸರು‌ ಸ್ಥಳಕ್ಕೆ ಧಾವಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!