ಇಲ್ಲಿ  ಒಂದು ವ್ಹೀಲ್​ ಚೇರ್ ಇಲ್ಲ: ಏರ್​ ಇಂಡಿಯಾ ವಿರುದ್ಧ ಖುಷ್ಬು ಕಿಡಿ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಏರ್​ ಇಂಡಿಯಾ (Air India) ವಿಮಾನ ಯಾನ ಸಂಸ್ಥೆ ವಿರುದ್ಧ ಬಿಜೆಪಿ ನಾಯಕಿ, ಚಿತ್ರ ನಟಿ ಖುಷ್ಬು ಸುಂದರ್​ ಕಿಡಿಕಾರಿದ್ದಾರೆ.
ಏರ್​ ಇಂಡಿಯಾದ್ದು ಅತ್ಯಂತ ಕಳಪೆ ಮಟ್ಟದ ಸೇವೆ, ಅವರ ಬಳಿ ಒಂದು ವ್ಹೀಲ್​ ಚೇರ್​ (ಗಾಲಿ ಕುರ್ಚಿ) ಕೂಡ ಇಲ್ಲ ಎಂದು ಟ್ವಿಟರ್​ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.

‘ನನಗೆ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಅಲ್ಲಿ ಪಟ್ಟಿಕಟ್ಟಲಾಗಿದೆ. ನಡೆದಾಡಲು ಸಾಧ್ಯವಿಲ್ಲ. ಚೆನ್ನೈ ಏರ್​ಪೋರ್ಟ್​​ನಲ್ಲಿ ನನಗೆ ಕೆಟ್ಟ ಅನುಭವ ಆಯಿತು. ಏರ್​ ಇಂಡಿಯಾದವರು ನನಗೆ ಒಂದು ವ್ಹೀಲ್​ ಚೇರ್​ ಒದಗಿಸಲು 30 ನಿಮಿಷ ಕಾಯಿಸಿದರು. ಆಮೇಲೆ ಕೂಡ ಇನ್ನೊಂದು ವಿಮಾನಯಾನ ಸಂಸ್ಥೆಯಿಂದ ಎರವಲು ಪಡೆದು ನನಗೆ ನೀಡಿದರು ಹೊರತು ಅವರ ಪ್ರಯಾಣಿಕರಿಗಾಗಿ, ಅವರದ್ದೇ ಒಂದು ವ್ಹೀಲ್​ಚೇರ್​​ನ್ನು ಇಟ್ಟುಕೊಂಡಿಲ್ಲ. ಏರ್​ ಇಂಡಿಯಾ ಇಂಥ ವಿಷಯದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸಬೇಕು’ ಎಂದು ಹೇಳಿದ್ದಾರೆ.
ಖುಷ್ಬು ಟ್ವೀಟ್​ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿ ಟ್ವೀಟ್​ ಮಾಡಿದ ಏರ್​ ಇಂಡಿಯಾ ವಿಮಾನ ಯಾನ ಸಂಸ್ಥೆ ‘ಮೇಡಂ, ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ನಾವು ಈ ಬಗ್ಗೆ ಚೆನ್ನೈ ಏರ್​ಪೋರ್ಟ್ ಸಿಬ್ಬಂದಿಯನ್ನು ವಿಚಾರಿಸುತ್ತೇವೆ ಮತ್ತು ನಿಮಗಾದ ಅನನುಕೂಲತೆಗೆ ವಿಷಾದಿಸುತ್ತೇವೆ’ ಎಂದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here