ʼಮನೆ ಹತ್ರನೇ ಇದೆ ಬಾರೋ ಎಂದು ಕರೆದಿದ್ದರು, ಆಗ ಹೋಗಲಿಲ್ಲ, ಈಗ ಹೋಗೋಕೆ ಆಗೋದಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮನೆ ಹತ್ರನೇ ಇದೆ ಕಣೋ ಬಾರೋ ಎಂದು ಪ್ರೀತಿಯಿಂದ ಅಣ್ಣ ಕರೆದಿದ್ದರು, ಆಗ ಹೋಗೋಕೆ ಆಗಿರಲಿಲ್ಲ. ಈಗ ಹೋಗಬೇಕು ಎನ್ನಿಸುತ್ತಿದೆ. ಆದರೆ ಅವರೇ ಇಲ್ಲ..

ಹಾಸ್ಯನಟ ಟೆನ್ನಿಸ್‌ ಕೃಷ್ಣ ಕಣ್ಣೀರ ನುಡಿಗಳಿವು.. ನಾವಿಬ್ಬರೂ ಅಣ್ಣ-ತಮ್ಮಂದಿರ ರೀತಿ ಇದ್ದೆವು. ಈಗ ಅವರಿಲ್ಲ ಎಂದರೆ ನಂಬೋದಕ್ಕೆ ಆಗುತ್ತಿಲ್ಲ ಎಂದಿದ್ದಾರೆ.

ಎಲ್ಲ ನಟರ ಜೊತೆಗೆ ಪಾತ್ರ ಮಾಡಿದ್ದಾರೆ. ನಾನು ಕೂಡ ಬಹಳಷ್ಟು ಸಿನಿಮಾ ಮಾಡಿದ್ದೇನೆ. ಬಹಳ ವರ್ಷಗಳ ಹಿಂದೆ ಓಪನ್ ಹಾರ್ಟ್​ ಸರ್ಜರಿ ಆಗಿತ್ತು. ಆನಂತರ ಚೇತರಿಸಿಕೊಂಡಿದ್ದರು. ಸಾವಿನ ಅರ್ಧ ಗಂಟೆ ಹಿಂದಷ್ಟೇ ಅವರನ್ನು ನೆನಪಿಸಿಕೊಂಡೆ. ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬಹುದಾ ಅಂತ ಯೋಚಿಸಿದ್ದೇ. ಕಡೆಯಾಗಿ ಕಾರ್ಯಕ್ರಮಲ್ಲಿ ಭೇಟಿಯಾಗಿದ್ದೆವು.

ಇನ್ನೂ, ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ಸಂದರ್ಭದಲ್ಲಿ ನಟ ಜಗ್ಗೇಶ್​ ಜತೆ ಬ್ಯಾಂಕ್ ಜನಾರ್ಧನ್ ಹೆಚ್ಚು ಕಾಲ ಕಳೆದಿದ್ದರು. ಜಗ್ಗೇಶ್ ಬಹುತೇಕ ಚಿತ್ರಗಳಲ್ಲಿ ನಟಿಸಿರುವ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಜಗ್ಗೇಶ್​​ಗೆ ತಂದೆಯಾಗಿ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಸೂಪರ್​ನನ್ ಮಗ, ತರ್ಲೆ ನನ್ ಮಗ ಚಿತ್ರದಲ್ಲಿ ತಂದೆಯಾಗಿ ನಟಸಿದ್ದರು. ಹಾಸ್ಯಕ್ಕೆ ಕನ್ನಡದಲ್ಲಿ ಮುಸರಿ ಕೃಷ್ಣಮೂರ್ತಿ, ನರಸಿಂಹರಾಜು ಬಳಿಕ ಅವರ ಸ್ಥಾನವನ್ನ ತುಂಬಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!