ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಚಾಣಾಕ್ಯ ಎಂದು ಕರೆಯಲ್ಪಡುತ್ತಿದ್ದಂತ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಆಹ್ವಾನಿಸಿತ್ತು.ಆದರೆ ಕಿಶೋರ್ ಕಾಂಗ್ರೆಸ್ ನಾಯಕರ ಪ್ರಸ್ತಾವನೆಯನ್ನು ತಿರಸ್ಕಾರಿಸಿದ್ದಾರೆ.
ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಮಾತನಾಡಿ, ಪ್ರಶಾಂತ್ ಕಿಶೋರ್ ಅವರು ತಮಗೆ ಸೇರಲು ಪಕ್ಷದ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ಹೇಳಿದರು.
ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆಗಳ ನಂತರ, ಕಾಂಗ್ರೆಸ್ ಅಧ್ಯಕ್ಷರು 2024 ರ ಸಶಕ್ತ ಕ್ರಿಯಾ ಗುಂಪನ್ನು ಸೇರೋದಕ್ಕೆ ಆಹ್ವಾನಿಸಲಾಗಿತ್ತು. ಗುಂಪಿನ ಭಾಗವಾಗಿ ಪಕ್ಷವನ್ನು ಸೇರಲು ಅವರನ್ನು ಆಹ್ವಾನಿಸಿದ್ದಾರೆ. ಆದ್ರೇ ಅವರು ಕಾಂಗ್ರೆಸ್ ಪಕ್ಷದ ಪ್ರಸ್ತಾವನೆಯನ್ನು ನಿರಾಕರಿಸಿದರು. ಪಕ್ಷಕ್ಕೆ ನೀಡಿದ ಅವರ ಪ್ರಯತ್ನಗಳು ಮತ್ತು ಸಲಹೆಗಳನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ.