ಪದಾತಿ ಸೈನ್ಯ ದಿನ: ರಾಷ್ಟ್ರೀಯ ಯುದ್ಧಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಿದ ಸಿಡಿಎಸ್‌ ಜ.ಅನಿಲ್‌ ಚೌಹಾಣ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪದಾತಿ ಸೈನ್ಯ (Ifantry) ದ ದಿನದಂದು ರಾಷ್ಟ್ರದ ಸೇವೆಗಾಗಿ ಯುದ್ಧಭೂಮಿಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಪದಾತಿ ದಳದ ವೀರರನ್ನು ಗೌರವಿಸಲು ರಾಷ್ಟ್ರ ರಾಜಧಾನಿಯ ಯುದ್ಧ ಸ್ಮಾರಕದಲ್ಲಿ ಪುಷ್ಪನಮನ ಸಮಾರಂಭವನ್ನು ಆಯೋಜಿಸಲಾಗಿದ್ದು ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.

ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಜನರಲ್ ಅನಿಲ್ ಚೌಹಾಣ್, ಸಿಡಿಎಸ್, ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು, ಸೇನಾಪಡೆಯ ಉಪಾಧ್ಯಕ್ಷ ಮತ್ತು ರೆಜಿಮೆಂಟ್ಸ್ ಕರ್ನಲ್‌ಗಳು ಈ ಸಂದರ್ಭದಲ್ಲಿ ಪುಷ್ಪಾರ್ಚನೆ ಮಾಡಿದರು.

ಭಾರತೀಯ ಸೇನೆಯ ಅತಿದೊಡ್ಡ ಹೋರಾಟದ ಅಂಗವಾದ ಪದಾತಿ ದಳದ ಕೊಡುಗೆಗಳನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ 27 ರಂದು ಪದಾತಿಸೈನ್ಯದ ದಿನವನ್ನು ಸ್ಮರಿಸಲಾಗುತ್ತದೆ.

ಈ ದಿನವು ಒಂದು ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಹೊಂದಿದೆ,1947 ರಲ್ಲಿ ಇದೇ ದಿನದಂದು ಭಾರತೀಯ ಸೇನೆಯ ಪದಾತಿ ದಳದವರು ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದು ಶ್ರೀನಗರದ ಹೊರವಲಯದಿಂದ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ ಪಾಕಿಸ್ತಾನದ ಬೆಂಬಲಿತ ಆಕ್ರಮಣದಿಂದ ಜಮ್ಮು ಮತ್ತು ಕಾಶ್ಮೀರ ವನ್ನು ರಕ್ಷಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!