ಮೇಷ
ಏನು ಯೋಚಿಸಿದ್ದೀರೋ ಅದನ್ನೆ ಮಾಡಿ. ಹಠಾತ್ತನೆ ನಿಮ್ಮ ಯೋಜನೆ ಬದಲಿಸಬೇಡಿ. ಆರ್ಥಿಕ ಒತ್ತಡ ಹೆಚ್ಚು. ಮನೆಯಲ್ಲಿ ಶಾಂತಿಯುತ ಪರಿಸ್ಥಿತಿ.
ವೃಷಭ
ವೃತ್ತಿಯಲ್ಲಿ ಹೆಚ್ಚಿನ ಹೊಣೆಗಾರಿಕೆ.ಅದರಿಂದ ತಪ್ಪಿಸಿಕೊಳ್ಳುವ ಯತ್ನ ಮಾಡದಿರಿ. ಕೆಲವು ಬೆಳವಣಿಗೆ ನಿಮಗೆ ಅತೃಪ್ತಿ ಮೂಡಿಸೀತು. ತಾಳ್ಮೆಯಿಂದ ಕಾಯಿರಿ.
ಮಿಥುನ
ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ ಹೊರಬೇಕು.ಬಾಕಿ ಇರುವ ಕಾರ್ಯ ಮುಗಿಸಿ.ಆಪ್ತರ ಭಾವನಾತ್ಮಕ ಬೇಡಿಕೆಗೆ ಸ್ಪಂದಿಸಿರಿ.
ಕಟಕ
ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ನಿಮಗೆ ಒಳಿತೇ ಆಗುವುದು. ವಿವಾಹಿತರ ಪಾಲಿಗೆ ಸಂತೋಷ ತರುವ ಬೆಳವಣಿಗೆ.
ಸಿಂಹ
ಶಾಂತವಾಗಿ ಯೋಚಿಸಿ ಕಾರ್ಯವೆಸಗಿ. ದುಡುಕು, ರೋಷ ಪ್ರತಿಕೂಲ ಪರಿಣಾಮ ಉಂಟು ಮಾಡೀತು.ಅನಿರೀಕ್ಷಿತ ಖರ್ಚು ಹೆಚ್ಚುವುದು.
ಕನ್ಯಾ
ಮಾಡಿದ ಕಾರ್ಯದಲ್ಲಿ ಇಂದು ಪೂರ್ಣ ಫಲ ನಿರೀಕ್ಷಿಸಬೇಡಿ. ಸ್ವಲ್ಪಮಟ್ಟಿನ ನಿರಾಶೆ ಉಂಟಾದೀತು.ಕೆಲವರ ಅಸಹಕಾರ, ಟೀಕೆ ಎದುರಿಸುವಿರಿ.
ತುಲಾ
ಕೌಟುಂಬಿಕ ವಿಚಾರದಲ್ಲಿ ಇಂದು ಹೆಚ್ಚು ವ್ಯಸ್ತರಾಗುವಿರಿ. ಹಾಗಾಗಿ ಇನ್ನಿತರ ವಿಷಯಗಳು ಗೌಣವಾಗುತ್ತವೆ. ಆರ್ಥಿಕ ಒತ್ತಡ.
ವೃಶ್ಚಿಕ
ಮನೆಯಲ್ಲಿ ವಾಗ್ವಾದ ನಡೆದೀತು. ಮುಕ್ತ ಮಾತುಕತೆಯಿಂದ ಪರಿಸ್ಥಿತಿ ತಿಳಿಗೊಳಿಸಿ. ಬಿಗುಮಾನ ಸಲ್ಲದು.ಖರೀದಿಯಿಂದ ಖರ್ಚು ಹೆಚ್ಚಳ.
ಧನು
ದಿನವಿಡೀ ನಿಮಗೆ ಪೂರಕ ಪರಿಸ್ಥಿತಿ. ಸಂತೋಷದ ಮನಸ್ಥಿತಿ. ಆಪ್ತರಿಂದ ಅಚ್ಚರಿಯ ಸುದ್ದಿ ಕೇಳುವ ಸಂಭವ.ಬಂಧುಮಿತ್ರರ ಅನಿರೀಕ್ಷಿತ ಭೇಟಿ.
ಮಕರ
ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ.ಕೌಟುಂಬಿಕ ಸಮಸ್ಯೆ ನೆಮ್ಮದಿ ಕೆಡಿಸುವುದು. ಯಾರಿಂದ ನೆರವು ನಿರೀಕ್ಷಿಸುವಿರೋ ಅವರು ನೆರವಿಗೆ ಬರುವುದಿಲ್ಲ.
ಕುಂಭ
ಮೊದಲಿಗೆ ಬಾಕಿ ಉಳಿದಿರುವ ಕೆಲಸ ಮುಗಿಸಿರಿ.ಅದನ್ನು ಹಾಗೇ ಬಿಡಬೇಡಿ. ಅಜೀರ್ಣದಂತಹ ಆರೋಗ್ಯ ಸಮಸ್ಯೆ ಕಾಡಬಹುದು.
ಮೀನ
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಹಿತವಲ್ಲದ ಆಹಾರದಿಂದ ಹೊಟ್ಟೆ ಕೆಡಬಹುದು. ಮನಸ್ಥಿತಿ ಪದೇಪದೇ ಬದಲಾಗಬಹುದು.