ದಿನಭವಿಷ್ಯ: ಜನರ ನಡುವೆ ಬೆರೆಯುವುದು ಮುಖ್ಯ, ಎಲ್ಲರಿಂದ ದೂರವಾಗದಿರಿ

ಮೇಷ.
ಆಪ್ತರ ಕುರಿತಾದ ಚಿಂತೆ ಮನಸ್ಸನ್ನು ಕಾಡುವುದು. ಎಲ್ಲವೂ ಇದ್ದೂ ನೆಮ್ಮದಿ ಇಲ್ಲದ ಸ್ಥಿತಿಯನ್ನು ನೀವಿಂದು ಅನುಭವಿಸುವಿರಿ.
ವೃಷಭ
ಆರಾಮವಾಗಿ ದಿನ ಕಳೆಯಬೇಕೆಂಬ ನಿಮ್ಮ ಯೋಜನೆ ಫಲಿಸದು. ಅನಿರೀಕ್ಷಿತ ಬೆಳವಣಿಗೆ. ದಿನವಿಡೀ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ
ಅತಿಯಾದ ಕೆಲಸದ ಒತ್ತಡ. ಸುಗಮ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಅದಕ್ಕೆ ನಿಮ್ಮ ಉದ್ವಿಗ್ನ ಮನಸ್ಥಿತಿಯೂ ಕಾರಣ.
ಕಟಕ
ಕುಟುಂಬದ ನೆಮ್ಮದಿ ಹಾಳುಮಾಡುವ ಆಲೋಚನೆಯಿಂದ ದೂರವಿರಿ. ಚಾಡಿಮಾತನ್ನು ನಂಬಬೇಡಿ. ಅವರನ್ನು ದೂರವಿಡಿ.
ಸಿಂಹ
ಖಾಸಗಿ ಹಿತಾಸಕ್ತಿಗೆ  ಗಮನ ಹರಿಸಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯದಲ್ಲೆ ನಿಮ್ಮ ಸಮಯ ವಿನಿಯೋಗ. ಸಹನೆ ಕಳಕೊಳ್ಳದಿರಿ.
ಕನ್ಯಾ
ಹಳೆಯ ಕಾರ್ಯ ಗಳು ಈಗ ಪರಿಣಾಮ ಬೀರಬಹುದು. ಅಂದಿನ ತಪ್ಪನ್ನು ಈಗ ಸರಿಪಡಿಸಲು ಯತ್ನಿಸಿ. ಇತರರ ಸಹಕಾರ ನಿಮಗೆ ಸಿಗುವುದು.
ತುಲಾ
ಜನರ ನಡುವೆ ಬೆರೆಯಲು ಕಲಿಯಿರಿ. ಎಲ್ಲರಿಂದ ದೂರವಾಗದಿರಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿ. ಸಂಘರ್ಷಕ್ಕೆ ಹೋಗದಿರಿ.
ವೃಶ್ಚಿಕ
ಕೌಟುಂಬಿಕ ಒತ್ತಡವು ಅನಪೇಕ್ಷಿತ ಸನ್ನಿವೇಶ ಸೃಷ್ಟಿಸಬಹುದು. ಸಂಯಮದಿಂದ ವರ್ತಿಸಿ. ಪರಿಸ್ಥಿತಿ ಬಿಗಡಾಯಿಸಬೇಡಿ.
ಧನು
ಅತಿಯಾದ ಭಾವು ಕತೆಯು ಸಂಬಂಧದ ಮೇಲೆ ಪರಿಣಾಮ ಬೀರೀತು. ಎಲ್ಲವನ್ನೂ ಭಾವನಾತ್ಮಕತೆಯಿಂದ ಅಳೆಯಬೇಡಿ.
ಮಕರ
ಈ ದಿನ ನಿಮಗೆ ಪೂರಕವಾಗಿ ಆರಂಭ ವಾಗದಿದ್ದರೂ  ಬಳಿಕ ಎಲ್ಲವೂ ಸುಸೂತ್ರವಾಗ ಲಿದೆ. ನೀವು ಬಯಸಿದ ಕಾರ್ಯ ನೆರವೇರಲಿದೆ.
ಕುಂಭ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ಅವರು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸುತ್ತಾರೆ. ಆಪ್ತರಿಂದ ಸಾಂತ್ವನ.
 ಮೀನ
ಎಲ್ಲರೊಂದಿಗೆ ಹೊಂದಾಣಿಕೆ ಸಾಽಸಿ. ಸಂಘರ್ಷದಿಂದ ಕೆಲಸ ಆಗಲಾರದು. ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!