ದಿನಭವಿಷ್ಯ: ಎಷ್ಟೇ ಒತ್ತಡವಿರಲಿ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ!

ಮೇಷ
ವೃತ್ತಿಯಲ್ಲೂ, ಖಾಸಗಿಯಲ್ಲೂ ಮಹತ್ವದ ಬೆಳವಣಿಗೆ. ಪ್ರೀತಿಯ ವಿಷಯದಲ್ಲಿ ಪೂರಕ ಸನ್ನಿವೇಶ. ಕುಟುಂಬದಲ್ಲಿ ಸೌಹಾರ್ದ ವಾತಾವರಣ.
ವೃಷಭ
ಏರುಪೇರಿನ ದಿನ. ಅದಕ್ಕೆ ತಲೆ ಕೆಡಿಕೊಳ್ಳದಿರಿ. ನಿಮ್ಮಿಂದ ಪ್ರಾಮಾಣಿಕ  ನಡೆ ಮೂಡಿಬರಲಿ. ವೃತ್ತಿ- ಖಾಸಗಿ ಬದುಕಿನ ಮಧ್ಯೆ ಸಮತೋಲನವಿರಲಿ.
ಮಿಥುನ
ನಿಮ್ಮ ಗುರಿಯನ್ನೆ ಬದಲಿಸಬೇಕಾದ ಪ್ರಸಂಗ ಒದಗೀತು. ಸದ್ಯದ ಗುರಿ ಸಾಧನೆ ಕಷ್ಟವೆಂದಾದೀತು. ಖರ್ಚಿನ ಮೇಲೆ ನಿಯಂತ್ರಣ ಸಾಽಸಿರಿ.
ಕಟಕ
ಕಚೇರಿ ರಾಜಕೀಯ ದಿಂದ ದೂರವಿರಿ. ಯಾರ ಪಕ್ಷ ವಹಿಸಲು ಹೋಗಬೇಡಿ. ಮನೆಯಲ್ಲಿ ಸಣ್ಣ ವಿಷಯಕ್ಕೆ ಕಲಹ ವಾದೀತು. ಸಹನೆಯಿರಲಿ.
ಸಿಂಹ
ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊರಗಿನ ತಿಂಡಿ ತಿನ್ನಬೇಡಿ. ಗೆಳೆಯರಿಗೆ ಸಾಲ ನೀಡಬೇಡಿ, ಮರಳಿ ಬರುವ ಸಾಧ್ಯತೆ ಕಡಿಮೆ.
ಕನ್ಯಾ
ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಸಂಬಂಧದ ಮೌಲ್ಯ ಅರಿಯಿರಿ.  ಬದುಕಿನ ಮಹತ್ವ ಎಲ್ಲಿದೆಯೆಂದು ಪರಾಮರ್ಶೆ ನಡೆಸಿರಿ.
ತುಲಾ
ಮಾತು ಪ್ರಾಮಾಣಿಕ ಆಗಿರಲಿ. ಕೇಳುವವರಿಗೆ ನಿಮ್ಮ ಉದ್ದೇಶ ಸ್ಪಷ್ಟ ವಾಗಲಿ. ಇದರಿಂದ ವಿಶ್ವಾಸ ವೃದ್ಧಿ.  ಆರೋಗ್ಯ ವಿಷಯದಲ್ಲಿ ನಿರಾಳತೆ.
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಸೂಕ್ತ ಪ್ರತಿ-ಲ ಲಭ್ಯ. ಸಂಗಾತಿ ಜತೆಗಿನ ವೈಷಮ್ಯ ನಿವಾರಣೆ. ಒತ್ತಡದಿಂದ ದೂರವಿರಿ. ವರ್ತಮಾನದ ಖುಶಿ ಆನಂದಿಸಿ.
ಧನು
ದೃಢ ನಿಲುವು ಮುಖ್ಯ ನಿಜ. ಆದರೆ ಅದು ನಿಮ್ಮ ಕೌಟುಂಬಿಕ ಶಾಂತಿ ಕದಡದಿರಲಿ. ಕ್ಲಿಷ್ಟ ಪರಿಸ್ಥಿತಿ ನಿಭಾಯಿಸುವುದು ನಿಮಗೆ ಕಷ್ಟವೇನಲ್ಲ.
ಮಕರ
ಎಷ್ಟೇ ಒತ್ತಡವಿದ್ದರೂ ನೆಮ್ಮದಿ ಕಳಕೊಳ್ಳದಿರಿ. ಆಶಾವಾದ ಬಿಡದಿರಿ. ಸಮಸ್ಯೆಗಳು ನಿಮಗೆ ಹೆಚ್ಚು ಹಾನಿ ಮಾಡದೆ ಪರಿಹಾರ ಕಾಣುವವು.
ಕುಂಭ
ಸಮಸ್ಯೆಯಿಂದ ನಲುಗಿದ್ದೀರಿ. ಆದರೆ ಪಾಸಿಟಿವ್ ಚಿಂತನೆ ಬೆಳೆಸಿಕೊಳ್ಳಿ. ಪರಿಹಾರದ ದಾರಿ ನಿಮ್ಮ ಕಣ್ಣ ಮುಂದೆ ಗೋಚರಿಸುವುದು.
 ಮೀನ
ನಿಮ್ಮಲ್ಲಿ ಈಗ ಇರುವುದರ ಕುರಿತು ತೃಪ್ತಿ ಬೆಳೆಸಿಕೊಳ್ಳಿ. ಜೀವನ ನಿರಾಳವಾಗುವುದು. ಸಿಗಲಾರದ್ದಕ್ಕೆ ಪರಿತಾಪ ಪಡುತ್ತಾ ಕೂರಬೇಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!