ದಿನಭವಿಷ್ಯ: ಕರ್ತವ್ಯ, ಕುಟುಂಬ ಎರಡಕ್ಕೆ ಹೆಚ್ಚಿನ ಗಮನ ಕೊಟ್ಟರೆ ಜೀವನ ಆರಾಮು!

ಮೇಷ
ನಿಮ್ಮ ಕರ್ತವ್ಯಕ್ಕೆ ಹೆಚ್ಚಿನ ಗಮನ ಕೊಡಿ. ಕೌಟುಂಬಿಕ ವಿಚಾರದಲ್ಲಿ ಸಡಿಲ ಮಾತು ಆಡದಿರಿ.  ಅದು ನಿಮ್ಮನ್ನು ಕಷ್ಟಕ್ಕೆ ದೂಡಬಹುದು.
ವೃಷಭ
ಮನೆಯಲ್ಲಿ ಸೌಹಾರ್ದ ವಾತಾವರಣ. ವಾಗ್ವಾದಕ್ಕೆ ಆಸ್ಪದ ಕೊಡದಿರಿ.  ಅಪೂರ್ಣ ಕಾರ್ಯವೊಂದು ಇಂದು ಪೂರ್ಣಗೊಳ್ಳಲಿದೆ.
ಮಿಥುನ
ಕೌಟುಂಬಿಕ ಪರಿಸರ ಹರ್ಷಪೂರ್ಣ.ಒತ್ತಡ, ಉದ್ವಿಗ್ನತೆ ಕಾಡದು. ವೈವಾಹಿಕ ಸಂಬಂಧ ಅನ್ವೇಷಣೆ ಸಫಲತೆ ಕಾಣಲಿದೆ.
ಕಟಕ
ಆತ್ಮೀಯ ಸಂಬಂಧ ಕಡಿಯುವ ಸಂಕೇತ ತೋರುತ್ತಿದೆ. ಗ್ರಹಗತಿ ಪ್ರತಿಕೂಲವಾಗಿದೆ.  ವೈಷಮ್ಯ ಬೆಳೆಯಲು ಅವಕಾಶ ಕೊಡಬೇಡಿ.
ಸಿಂಹ
ಕೌಟುಂಬಿಕ ವಿಚಾರ ವೊಂದು ತಾಕಲಾಟ ಸೃಷ್ಟಿಸುವುದು.  ಯುಕ್ತ ನಿರ್ಧಾರ ತಾಳಿ. ಸರ್ವರ ಸಹಕಾರ ಪಡಕೊಳ್ಳಿ. ಆರ್ಥಿಕ ಉನ್ನತಿ.
ಕನ್ಯಾ
ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಅತೃಪ್ತಿ. ನಿಮ್ಮದಲ್ಲದ ವಸ್ತುವಿಗೆ ಆಸೆ ಪಡದಿರಿ. ಇದ್ದುದರಲ್ಲಿ ತೃಪ್ತಿಯಿರಲಿ. ವೈಷಮ್ಯ ಬೆಳೆಯದಂತೆ ನೋಡಿ.
ತುಲಾ
ಏಕತಾನತೆಯ ಬದುಕಿನಿಂದ ಭಿನ್ನತೆ ಬಯಸುವಿರಿ. ಎಚ್ಚರಿಕೆಯ ನಡೆಯಿರಲಿ. ನಿಮ್ಮನ್ನು ಅಪಾಯಕ್ಕೆ ದೂಡಿಕೊಳ್ಳಬೇಡಿ.
ವೃಶ್ಚಿಕ
ಮನೆಯಲ್ಲಿ ಉದ್ವಿಗ್ನ ಪರಿಸ್ಥಿತಿ. ಸಣ್ಣ ಅಸಮಾಧಾನ ಸೌಹಾರ್ದ ಕೆಡಿಸದಂತೆ ಎಚ್ಚರ ವಹಿಸಿರಿ. ವಿವೇಕದ ನಡೆ ಅಗತ್ಯ, ಆತುರ ಬೇಡ.
ಧನು
ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿ. ಸಣ್ಣ ಮಾತೂ ಸಂಘರ್ಷಕ್ಕೆ ಕಾರಣ ಆದೀತು. ಅದಕ್ಕೆ ಆಸ್ಪದ ನೀಡದಿರಿ.  ಸಮಾಧಾನಚಿತ್ತ ಮುಖ್ಯ.
ಮಕರ
ನಿಮ್ಮ ನಡೆನುಡಿ ಇತರರಿಗೆ ತಪ್ಪರ್ಥ ಮೂಡಿಸದಂತೆ ಎಚ್ಚರ ವಹಿಸಿ. ಸಹಕಾರ, ಸೌಹಾರ್ದ ಬಾಂಧವ್ಯ ಉಳಿಸಬಲ್ಲುದು.
ಕುಂಭ
ಆತ್ಮೀಯ ವ್ಯಕ್ತಿ ನಿಮ್ಮನ್ನು ತಪ್ಪರ್ಥ ಮಾಡಿಕೊಳ್ಳಬಹುದು. ಅಂತಹ ಸಾಧ್ಯತೆ ಸೃಷ್ಟಿಸದಿರಿ. ನಿಲುವು ಪಾರದರ್ಶಕವಾಗಿರಲಿ.
ಮೀನ
ಸಂಕೀರ್ಣ  ವಿಷಯಕ್ಕೆ ಸಂಬಂಧಿಸಿ ತಜ್ಞರ ಸಲಹೆ ಪಡೆಯಿರಿ.ಕೌಟುಂಬಿಕ ಭಿನ್ನಮತ ಪರಿಹರಿಸಲು ಹೆಚ್ಚು ಗಮನ ಕೊಡಿ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!