ದಿನಭವಿಷ್ಯ: ನಿಮ್ಮ ಸತತ ಪ್ರಯತ್ನವೇ ಗೆಲುವಿಗೆ ಕಾರಣ, ಧನಾಗಮನ

ಮೇಷ
ನಿಮ್ಮ ಸತತ ಪ್ರಯತ್ನದಿಂದ ಇಷ್ಟಾರ್ಥ ಸಿದ್ಧಿ. ಧನಾಗಮ. ಆರೋಗ್ಯ ಸ್ಥಿತಿಯೂ ಉತ್ತಮ. ಒಟ್ಟಿನಲ್ಲಿ ನಿಮ್ಮ ಪಾಲಿಗೆ ಇಂದು ಸುದಿನ.
ವೃಷಭ
ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಇರಲಿ. ಇತರ ಕ್ಷುಲ್ಲಕ ವಿಷಯಗಳತ್ತ ಗಮನ ಹರಿಯುವುದು ಬೇಡ. ಸಾಂಸಾರಿಕ ಅಸಮಾಧಾನ.
ಮಿಥುನ
ಮಾನಸಿಕ ಒತ್ತಡ.  ಕೌಟುಂಬಿಕ  ವಿರಸ. ಆತುರದ ಪ್ರತಿಕ್ರಿಯೆ ಬೇಡ.  ಹೊಂದಾಣಿಕೆಯಿಂದ ವ್ಯವಹರಿಸಿ. ಧನಪ್ರಾಪ್ತಿ.
ಕಟಕ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಸಮನ್ವಯ. ಹಾಗಾಗಿ ಚಿಂತೆ ಬಾಽಸದು.  ಹಣಕಾಸು ಪರಿಸ್ಥಿತಿ ತೃಪ್ತಿಕರ. ಪ್ರೀತಿಯಲ್ಲಿ ವಿಘ್ನ ಕಂಡುಬಂದೀತು.
ಸಿಂಹ
ಇತ್ತೀಚೆಗೆ ಮೂಡಿದ್ದ ಸಂಕಷ್ಟ ಪರಿಹಾರ. ಕುಟುಂಬ ಮತ್ತು ಸ್ನೇಹಿತರ ಜತೆ ಸಂಪರ್ಕವಿರಲಿ. ಉದ್ಯೋಗ ಬದಲಾವಣೆ ಒಳಿತು ತಾರದು.
ಕನ್ಯಾ
ಕೌಟುಂಬಿಕ ಹಿತಾಸಕ್ತಿಗೆ ಆದ್ಯತೆ ಕೊಡಿ. ಅವರ ಬೇಕುಬೇಡ ವಿಚಾರಿಸಿ. ಉದ್ಯಮದಲ್ಲಿ ತುಸು ಹಿನ್ನಡೆ ಸಂಭವ. ಆರ್ಥಿಕ ಒತ್ತಡ.
ತುಲಾ
ಕೆಲದಿನಗಳ ಚಿಂತೆ ಕಳೆದು ನಿರಾಳತೆ ಮೂಡಬಹುದು. ಹಾಗೆಂದು ಸಮಸ್ಯೆ ಪೂರ್ಣ ಪರಿಹಾರ ಆಯಿತೆಂದು ಅರ್ಥವಲ್ಲ.
ವೃಶ್ಚಿಕ
ಕಳೆದು ಹೋದುದರ ಕುರಿತು ಕೊರಗುತ್ತಾ ಕೂರದಿರಿ. ಕೆಲ ವಿಷಯ ಮರೆಯುವುದೇ ಉತ್ತಮ. ಇರುವ ಪರಿಸ್ಥಿತಿಯಲ್ಲಿ ಸಮಾಧಾನ ತಾಳಿರಿ.
ಧನು
ಉದ್ಯೋಗ ಕ್ಷೇತ್ರದಲ್ಲಿ ಪೂರಕ ಬೆಳವಣಿಗೆ. ಕಾರ್ಯಸಿದ್ಧಿ. ಆರ್ಥಿಕ ಸ್ಥಿತಿ ತೃಪ್ತಿಕರ.  ಕೌಟುಂಬಿಕ ವಿರಸ ಶಮನ, ಸೌಹಾರ್ದ ವಾತಾವರಣ.
ಮಕರ
ಪ್ರಮುಖ ವಿಷಯ ನಿಮ್ಮನ್ನು ದ್ವಂದ್ವದಲ್ಲಿ ಕೆಡವಲಿದೆ. ಪರಿಸ್ಥಿತಿಗೆ ತಕ್ಕಂತೆ ವ್ಯವಹರಿಸಿ. ಕೌಟುಂಬಿಕ ಸೌಹಾರ್ದ, ಸಹಕಾರ ಲಭ್ಯ.
ಕುಂಭ
ಭವಿಷ್ಯದ ಬಗ್ಗೆ ಯೋಚಿಸುವ ಕಾಲ ಬಂದಿದೆ. ಖರ್ಚುವೆಚ್ಚ ನಿಯಂತ್ರಿಸಿ. ವೃತ್ತಿಯಲ್ಲಿ ವಾಗ್ವಾದ ತಪ್ಪಿಸಿ. ಏಕಾಂಗಿಗಳಿಗೆ ವೈವಾಹಿಕ ಭಾಗ್ಯ.
ಮೀನ
ಆರ್ಥಿಕ ಉನ್ನತಿ, ಉದ್ಯಮದಲ್ಲಿ ಯಶಸ್ಸು. ಅತಿಯಾದ ದೈಹಿಕ ಶ್ರಮದಿಂದ ಮೈನೋವು ಉಂಟಾದೀತು.  ಕೌಟುಂಬಿಕ ಸಹಕಾರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!