ದಿನಭವಿಷ್ಯ: ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಮಯ, ಇತರರ ಅಭಿಪ್ರಾಯವನ್ನೂ ಪರಿಗಣಿಸಿ..

ಮೇಷ
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಕೆಲಸದ ಹೊಣೆಗಾರಿಕೆ ಹೆಚ್ಚಲಿದೆ. ಒತ್ತಡ ಹೆಚ್ಚಿದರೂ, ಧನಲಾಭವೂ ಇದೆ. ಆಪ್ತ ಬಂಧುಗಳ ಸಹಕಾರ ಸಿಗಲಿದೆ.

ವೃಷಭ
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಗಳಿಗೆ  ಸ್ಪಂದಿಸಿ. ಹಿತಮಿತ ಆಹಾರ ಒಳಿತು. ಅಜೀರ್ಣದಂತಹ ಸಮಸ್ಯೆ ಕಾಡೀತು.

ಮಿಥುನ
ಇತರರು ನಿಮ್ಮ ಕುರಿತಂತೆ ವದಂತಿ ಹರಡಬಹುದು. ಅದರಿಂದ ಮನಶ್ಯಾಂತಿ ಕದಡಬಹುದು. ಮನಬಂದಂತೆ ಖರ್ಚು ಮಾಡಬೇಡಿ.

ಕಟಕ
ದೇಹಾಲಸ್ಯ ಕಾಡಬಹುದು. ಅದರಿಂದ ಕಾರ್ಯಗಳು ನಿಧಾನ. ಕೌಟುಂಬಿಕ ಭಿನ್ನಮತ ನಿವಾರಿಸಿ. ಇತರರ ಕಿವಿಮಾತು ಆಲಿಸಿ ವರ್ತಿಸಿ.

ಸಿಂಹ
ಮನೆಯಲ್ಲಿ ಹೆಚ್ಚು ಕಾರ್ಯದ ಹೊರೆ. ಇಷ್ಟವಿಲ್ಲದೆ ಇದ್ದರೂ ಅದನ್ನು ನಿಭಾಯಿಸಲೇ ಬೇಕು. ಬಂಧುಗಳ ಕಿರಿಕಿರಿ. ಮಾತಿನ ಚಕಮಕಿ ಸಂಭವ.

ಕನ್ಯಾ
ಮುಖ್ಯ ವಿಚಾರದಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ಇದರಿಂದ ಸಂಭವನೀಯ ಭಿನ್ನಮತ ತಪ್ಪಿಸಬಹುದು. ನಿಮ್ಮ ಹಠಮಾರಿ ಧೋರಣೆ ಬಿಟ್ಟುಬಿಡಿ.

ತುಲಾ
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ಪರಿಸ್ಥಿತಿ ವಾತಾವರಣ. ಸಂಘರ್ಷ ಸಾಧ್ಯತೆ. ಮನೆಯಲ್ಲಿನ ಶಾಂತ ಪರಿಸರದಿಂದ ಮನಸ್ಸು ನಿರಾಳವಾಗುವುದು.

ವೃಶ್ಚಿಕ
ಇಂದು ನಿಮ್ಮ ನಡೆನುಡಿ ಸಂಯಮದಿಂದಿರಲಿ. ಇತರರಿಗೆ ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ಸಂಘರ್ಷ  ಉಂಟಾದೀತು.

ಧನು
ವೃತ್ತಿಯಲ್ಲಿ ಉಂಟಾಗಿರುವ  ಸಮಸ್ಯೆ ಪರಿಹರಿಸಿ. ಅದನ್ನು ಹಾಗೇ ಬಿಟ್ಟುಬಿಡಬೇಡಿ. ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ.

ಮಕರ
ಬಂಧುದ್ವೇಷ ಸಾಧಿಸದಿರಿ. ಭಿನ್ನಮತವನ್ನು  ಸಂಧಾನದಿಂದ  ಪರಿಹರಿಸಿ. ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.

ಕುಂಭ
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟ ಪಡುವಿರಿ. ಮಾನಸಿಕ ಒತ್ತಡ ಹೆಚ್ಚು.  ಕೌಟುಂಬಿಕ ಸಹಕಾರ ಪಡೆಯಿರಿ.  ಆರ್ಥಿಕ ಒತ್ತಡ ಹೆಚ್ಚುವುದು.

ಮೀನ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣಲಿದೆ. ಮುಖ್ಯ ಕೆಲಸದಲ್ಲಿ ಅವಸರ ತೋರದಿರಿ, ಸಂಯಮ ವಹಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!