ದಿನಭವಿಷ್ಯ : ಪ್ರೀತಿ ವಿಷಯದಲ್ಲಿ ಪೂರಕ ಬೆಳವಣಿಗೆ, ಲೆಕ್ಕಾಚಾರಗಳೆಲ್ಲಾ ಸರಿಯಾಗುವುದು!

ಮಂಗಳವಾರ, 21 ಫೆಬ್ರವರಿ 2023, ಮಂಗಳೂರು

ಮೇಷ
ದೊಡ್ಡ ಸಾಧನೆಯೂ ಇಲ್ಲದ ಹಿನ್ನಡೆಯೂ ಕಾಣದ ಸಾಧಾರಣ ದಿನ. ಖರ್ಚು ಹೆಚ್ಚು. ಇದೇವೇಳೆ, ಆಪ್ತರ ಸಂಗದಲ್ಲಿ ಸಂತೋಷ ಕಾಣುವಿರಿ.

ವೃಷಭ
ಯಶಸ್ವೀ ದಿನ. ಕಾರ್ಯಸಿದ್ಧಿ. ನೀವು ಬಹುಕಾಲದಿಂದ ಕಾಯುತ್ತಿದ್ದ ಬೆಳವಣಿಗೆಯೊಂದು ಇಂದು ಆಗಲಿದೆ.ಅದರಿಂದ ತೃಪ್ತಿ.

ಮಿಥುನ
ಹೆಚ್ಚಿನ ಏರುಪೇರು ಇಲ್ಲದ ಸಾಧಾರಣ ದಿನ. ಏಕತಾನತೆಯ ಕೆಲಸ ನೀರಸ ಎನಿಸಬಹುದು.ಕೌಟುಂಬಿಕ ಪರಿಸರದಲ್ಲಿ ಉತ್ಸಾಹ, ಸಂತೋಷ ಕಾಣುವಿರಿ.

ಕಟಕ
ಉದ್ಯೋಗದಲ್ಲಿ ಶುಭ ಬೆಳವಣಿಗೆ. ವಿಘ್ನಗಳು ಪರಿಹಾರ. ಬಂಧುಗಳಿಂದ ಕಹಿ ಮಾತು ಕೇಳಿ ಬರಬಹುದು. ಅದರಿಂದ ವಿಚಲಿತರಾಗದಿರಿ.

ಸಿಂಹ
ನಿಮ್ಮ ಹಿತಾಸಕ್ತಿ ರಕ್ಷಣೆಗೆ ಆದ್ಯತೆ ಕೊಡಿ.ನಿಮಗೆ ಸೂಕ್ತವಲ್ಲದ ಪ್ರಸ್ತಾಪಗಳನ್ನು ತಿರಸ್ಕರಿಸಲು ಹಿಂಜರಿಕೆ ಬೇಡ. ಆಮಿಷಕ್ಕೆ ಬಲಿಯಾಗಬೇಡಿ.

ಕನ್ಯಾ
ಆಪ್ತರ ಜತೆ ಸಂಬಂಧದಲ್ಲಿ ಅಹಂ ಸಂಘರ್ಷ ಬರದಂತೆ ನೋಡಿಕೊಳ್ಳಿ. ಕುಟುಂಬ ಸದಸ್ಯರ ಜತೆ ವಾಗ್ವಾದಕ್ಕೆ ಇಳಿಯದಿರಿ ಮೌನ ಸಾಧಿಸಿರಿ.

ತುಲಾ
ಪ್ರೀತಿಯ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ. ನಿಮ್ಮ ಲೆಕ್ಕಾಚಾರಗಳೆಲ್ಲ ಸರಿಯಾಗುವುದು. ಬಂಧುಗಳಿಂದ ಸಹಕಾರ ಪಡೆಯುವಿರಿ.

ವೃಶ್ಚಿಕ
ಮನೆಯಲ್ಲಿ ಮತ್ತು ಕಚೇರಿಯಲ್ಲಿ ಹೆಚ್ಚು ಹೊಣೆಗಾರಿಕೆ.ಆರಂಭದಲ್ಲಿ ಕಷ್ಟ ಪಟ್ಟರೂ ದಿನದಂತ್ಯಕ್ಕೆ ಎಲ್ಲವನ್ನು ಮುಗಿಸಲು ಸಫಲರಾಗುವಿರಿ.

ಧನು
ನಿಮ್ಮ ಸ್ವಭಾವವು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಅಗತ್ಯ.ಅದರಂತೆ ನಡೆದುಕೊಳ್ಳಿ.

ಮಕರ
ಉದ್ಯೋಗದಿಂದ ಹೊರತಾದ ಇನ್ನಿತರ ಆರ್ಥಿಕ ಮೂಲಗಳಿಗೆ ಹುಡುಕಾಟ ನಡೆಸುತ್ತಿದ್ದರೆ ಅದರಲ್ಲಿ ಸಫಲತೆ ಸಿಗುವುದು.ಕೌಟುಂಬಿಕ ಶಾಂತಿ.

ಕುಂಭ
ಭಾವನಾತ್ಮಕ ಸಂಘರ್ಷ. ಆಪ್ತರೊಬ್ಬರ ಕುರಿತು ಸ್ಪಷ್ಟ ನಿಲುವು ತಾಳಲಾಗದೆ ತಳಮಳ. ಎಲ್ಲರ ಸಹಕಾರ ಪಡೆದು ಸೂಕ್ತ ನಿರ್ಧಾರ ತಾಳಿ, ಹಿಂಜರಿಕೆ ಬೇಡ.

ಮೀನ
ನಿಮ್ಮನ್ನು ತುಳಿಯಲು ಕಾದಿರುವ ವ್ಯಕ್ತಿಗಳ ಕುರಿತು ಎಚ್ಚರವಿರಲಿ.ವಾದಕ್ಕೆ ಇಳಿಯದಿರಿ.ಸಹನೆಯಿಂದ ವರ್ತಿಸಿರಿ. ಎಲ್ಲವೂ ಒಳಿತಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!