ದಿನಭವಿಷ್ಯ: ಉದ್ಯೋಗದಲ್ಲಿ ಹೊಸ ಅವಕಾಶ, ವಿವೇಚಿಸಿ ನಿರ್ಧಾರ ತಾಳಿ

ಮೇಷ
ಯಾವುದೇ ಕಾರ್ಯ ಮಾಡುವುದಿದ್ದರೂ ಅದನ್ನು ಆನಂದಿಸಿ. ಕಾಟಾಚಾರದ ಧೋರಣೆ ಬೇಡ. ಸ್ನೇಹಿತರ ಬೇಡಿಕೆ ಈಡೇರಿಸಲು ಕಷ್ಟವಾದೀತು.

ವೃಷಭ
ಬಿಡುವಿಲ್ಲದ ದಿನ. ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನ. ನೀವು ಬಯಸಿದ ವಿರಾಮ ಸಿಗುವುದಿಲ್ಲ. ಕೌಟುಂಬಿಕ ಬಿಕ್ಕಟ್ಟೊಂದು ಪರಿಹಾರ.

ವೃಷಭ
ಬಿಡುವಿಲ್ಲದ ದಿನ. ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನ. ನೀವು ಬಯಸಿದ ವಿರಾಮ ಸಿಗುವುದಿಲ್ಲ. ಕೌಟುಂಬಿಕ ಬಿಕ್ಕಟ್ಟೊಂದು ಪರಿಹಾರ.

ಕಟಕ
ಮುಖ್ಯ ವಿಷಯದಲ್ಲಿ ನೀವಿಂದು ತಳೆಯುವ ನಿರ್ಧಾರ ದೂರಗಾಮಿ ಪರಿಣಾಮ ಬೀರುವುದು. ಆಪ್ತರ ಸಂಗಡ ವಾಗ್ವಾದ ನಡೆದೀತು. ನೆಮ್ಮದಿ ಹಾಳು.

ಸಿಂಹ
ನಿಮಗೆ ಪ್ರಾಮುಖ್ಯತೆ ನೀಡದ ವ್ಯಕ್ತಿಗಳ ಜತೆ ಭಾವನಾತ್ಮಕ ಬಂಧ ಬಿಟ್ಟುಬಿಡಿ. ಅದರಿಂದ ನಿಮಗೆ ನೋವೇ ಹೆಚ್ಚು. ಹಿತೈಷಿಗಳ ಹಿತವಚನಕ್ಕೆ ಕಿವಿಗೊಡಿ.

ಕನ್ಯಾ
ಮುಖ್ಯ ಕೆಲಸ ಮುಂದೂಡುತ್ತ್ತಾ ಬರುತ್ತಿದ್ದೀರಿ. ಇನ್ನಾದರೂ ಅದನ್ನು ಕೂಡಲೇ ಕೈಗೆತ್ತಿಕೊಳ್ಳಿ. ಇತರರ ಸಹಕಾರದ ನಿರೀಕ್ಷೆ ಮಾಡಬೇಡಿ.

ತುಲಾ
ನಿಷ್ಠೆಯಿಂದ ಕಾರ್ಯ ಎಸಗಿದರೆ ಎಲ್ಲವೂ ಫಲಪ್ರದ. ಅರೆಮನಸ್ಸಿನ ಕೆಲಸ ಫಲ ನೀಡದು. ಪ್ರೀತಿಪಾತ್ರರ ಜತೆಗೆ ಮನಸ್ತಾಪ ಸಂಭವ. ವಿವೇಚನೆಯಿರಲಿ.

ವೃಶ್ಚಿಕ
ಉದ್ಯೋಗದಲ್ಲಿ ಹೊಸ ಅವಕಾಶ. ವಿವೇಚಿಸಿ ನಿರ್ಧಾರ ತಾಳಿ. ಖಾಸಗಿ ವಿಷಯದಲ್ಲಿ ಸಮಸ್ಯೆ, ಚಿಂತೆ ಕಾಡುವುದು. ಪರಿಹಾರದ ದಾರಿ  ತೋರದೆ ಅಶಾಂತಿ.

ಧನು
ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು. ಆದಾಯಕ್ಕಿಂತ ಹೆಚ್ಚಿನ ಖರೀದಿಗೆ ಉತ್ಸಾಹ ತೋರದಿರಿ. ಅದರಿಂದ ಹಣದ ಬಿಕ್ಕಟ್ಟು ಎದುರಿಸುವಿರಿ.

ಮಕರ
ದುಡುಕಿನ ವರ್ತನೆ, ರೋಷದ ಮಾತು ಆತ್ಮೀಯ ಸಂಬಂಧಕ್ಕೆ ಧಕ್ಕೆ ತಂದೀತು. ಸಹನೆ ಕಾಯುವುದು ಅಗತ್ಯ. ಹಣದ ಮುಗ್ಗಟ್ಟು ಎದುರಿಸುವಿರಿ.

ಕುಂಭ
ಆರೋಗ್ಯದ ಕುರಿತು ಎಚ್ಚರ ವಹಿಸಿ. ದೈಹಿಕ ಆಲಸ್ಯ, ಕಿರಿಕಿರಿ ಬಾಧಿಸಬಹುದು. ನೀವು ನೀಡಿದ ಹಳೆಯ ಸಾಲವೊಂದು ಮರು ಪಾವತಿಯಾಗಲಿದೆ.

ಮೀನ
ಕೌಟುಂಬಿಕ ಉದ್ವಿಗ್ನತೆಗೆ ಕಾರಣವಾಗಿದ್ದ್ದ ವಿಷಯ ಇತ್ಯರ್ಥ ಕಾಣುವುದು. ಬಂಧುಗಳ ಸಹಕಾರ. ಸಾಮರಸ್ಯ ಮೂಡುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!