ದಿನಭವಿಷ್ಯ: ಸಂಗಾತಿ ಜೊತೆ ಭಿನ್ನಾಭಿಪ್ರಾಯ ಉಂಟಾದೀತು, ಮಾತಿನ ಮೇಲೆ ನಿಗಾ ಇರಲಿ

ಬುಧವಾರ, 5 ಮಾರ್ಚ್ 2023, ಮಂಗಳೂರು

ಮೇಷ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಕಾರ್ಯಸಿದ್ಧಿ.ಆದರೆ ಅದಕ್ಕೆ ನಿಮ್ಮ ಶ್ರಮವೂ ಅಗತ್ಯ. ಕೆಲಸಗಳೆಲ್ಲ ಬೇರೆಯವರೆ ಮಾಡಲಿ ಎಂದು ಕೂರದಿರಿ.

ವೃಷಭ
ಸಂಗಾತಿ ಜತೆ  ಭಿನ್ನಮತ ಉಂಟಾದೀತು.ಮಾತು ಹದ ತಪ್ಪದಂತೆ ನೋಡಿಕೊಳ್ಳಿ.ಸಣ್ಣ ವಿಷಯ ವಿಕೋಪಕ್ಕೆ ಕೊಂಡೊಯ್ಯದಿರಿ. ಆರ್ಥಿಕ ಒತ್ತಡ.

ಮಿಥುನ
ಸಂಬಂಧದಲ್ಲಿ  ಗೊಂದಲ. ಕೆಲವು ಮಾತು ಅಥವಾ ವರ್ತನೆ ತಪ್ಪು ಅಭಿಪ್ರಾಯಕ್ಕೆ ಕಾರಣವಾದೀತು. ಆತುರದಿಂದ ಅವರನ್ನು ತೀರ್ಮಾನಿಸಬೇಡಿ.

ಕಟಕ
ಕೆಲಸವನ್ನು ಸಕಾಲದಲ್ಲಿ ಮುಗಿಸಲು ಆದ್ಯತೆ ಕೊಡಿ. ಉದಾಸೀನತೆ ತಾಳಿದರೆ ಕೆಲಸದ ಒತ್ತಡ ಅಧಿಕವಾದೀತು. ಬಂಧುಮಿತ್ರರಿಂದ ನೆರವು ಅಲಭ್ಯ.

ಸಿಂಹ
ಇತರರ ಜತೆ ವ್ಯವಹರಿಸುವಾಗ ವಿನಯವಿರಲಿ. ನಿಮ್ಮ ವರ್ತನೆಯಿಂದ ಇತರರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಹಣದ ಒತ್ತಡ ನಿವಾರಣೆ.

ಕನ್ಯಾ
ಕೆಲಸದ ಒತ್ತಡದಿಂದ ವಿರಾಮ ಪಡೆದು ಆತ್ಮೀಯರ ಜತೆ ಕಾಲ ಕಳೆಯುವ ಯೋಜನೆ. ಅದಕ್ಕೆ ಕೆಲವು ವಿಘ್ನ ಬಂದೀತು. ಖರ್ಚು ಮಿತಗೊಳಿಸಿರಿ.

ತುಲಾ
ಹೊಸ ವ್ಯವಹಾರದಲ್ಲಿ ಹಣ ಹೂಡುವುದು ಲಾಭ ತರುವುದು. ಕುಟುಂಬದಲ್ಲಿ  ಸಣ್ಣ ವಿಷಯಕ್ಕೆ ವೈಮನಸ್ಸು ಉಂಟಾದೀತು. ಸಮಾಧಾನವಿರಲಿ.

ವೃಶ್ಚಿಕ
ಸಣ್ಣ ಜಗಳ, ವಾಗ್ವಾದದಿಂದ ದೂರವಿರಿ. ವೃತ್ತಿಯಲ್ಲಿ ಕೆಲಸದ ಹೊರೆ ಹೆಚ್ಚಳ. ಹಣಕಾಸು ಲಾಭ. ಜತೆಗೇ ಖರ್ಚೂ ಹೆಚ್ಚಳ. ಬಂಧುಗಳ ಭೇಟಿ.

ಧನು
ಕೌಟುಂಬಿಕವಾಗಿ ಸೌಹಾರ್ದ, ಸಾಮರಸ್ಯ. ವೃತ್ತಿಯಲ್ಲಿ  ಇತರರ  ಜತೆ ಸಂಘರ್ಷ ನಡೆದೀತು. ಅನಿರೀಕ್ಷಿತ  ಖರ್ಚು ಒದಗಿ ಬರುವುದು.

ಮಕರ
ಯಾವುದೋ ವಿಷಯದಲ್ಲಿ ಗೊಂದಲ ಕಾಡುವುದು. ಸರಿಯಾದ ನಿರ್ಧಾರ ತಾಳಲಾಗದೆ ತೊಳಲಾಟ. ಹಿರಿಯರ ಸಲಹೆ ಪಡೆಯಿರಿ.

ಕುಂಭ
ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಲಿಯಿರಿ. ಹಳೆಯದಕ್ಕೇ ಅಂಟಿಕೊಳ್ಳದಿರಿ. ನಿಮ್ಮ ನಡೆ ಕೆಲವರಿಗೆ ಸಮಸ್ಯೆ ಸೃಷ್ಟಿಸಬಹುದು. ಸಹನೆಯಿರಲಿ.


ಮೀನ
ಮನೆಯಲ್ಲಿ ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಲು ಕಲಿಯಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!