Travel | ಹೆಚ್ಚಿನವರಿಗೆ ಗೊತ್ತೇ ಇಲ್ಲ ಕರ್ನಾಟಕದ ಈ 3 ಅಪರೂಪದ ಪ್ರವಾಸಿ ಸ್ಥಳಗಳ ಬಗ್ಗೆ! ನಿಮಗೆ ಗೊತ್ತಿತ್ತಾ?

ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಜವಾಬ್ದಾರಿಗಳಿಂದ ದೂರ ಹೋಗಿ ಮನಸ್ಸಿಗೆ ತಂಪು ನೀಡುವ ಹಸಿರಿನ ಮಧ್ಯೆ ತಮ್ಮ ದಿನವನ್ನು ಅನುಭವಿಸಲು ಇಷ್ಟವಿರುತ್ತದೆ. ಎಲ್ಲರಿಗೂ ಗೊತ್ತಿರುವ ಊಟಿ, ಮೈಸೂರು ಅಥವಾ ಕೊಡಗು ಮಾತ್ರವಲ್ಲದೆ, ಕರ್ನಾಟಕದಲ್ಲಿ ಬಹುಪಾಲು ಜನರಿಗೆ ತಿಳಿಯದ ಅನೇಕ ಸುಂದರ ಸ್ಥಳಗಳಿವೆ. ಈ ವಿಕೆಂಡ್‌ಅಲ್ಲಿ ಹೊಸ ಅನುಭವಕ್ಕಾಗಿ ಈ ಮೂರು ಅಪರೂಪದ ಸ್ಥಳಗಳಿಗೆ ಭೇಟಿ ನೀಡಬಹುದು.

ಗುಮ್ಮನಾಯಕ ಕೋಟೆ – ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸಮೀಪದ ಈ ಕೋಟೆ ಸುಮಾರು 150 ಅಡಿ ಎತ್ತರದಲ್ಲಿದೆ. ಈ ಕೋಟೆ ಚಾರಣಪ್ರಿಯರಿಗೆ ಅತ್ಯುತ್ತಮ ಸ್ಥಳ. ಇಲ್ಲಿ ಹನುಮಂತ ಹಾಗೂ ಗಣಪತಿ ದೇವಾಲಯವಿದೆ, ಜೊತೆಗೆ ಪಾಳುಬಿದ್ದ ಕೋಟೆ ಮತ್ತು ಬೆಟ್ಟದ ಶಿಖರದವರೆಗೆ ಸಾಗುವ ದಾರಿ ಈ ಪ್ರವಾಸವನ್ನು ರೋಮಾಂಚಕಗೊಳಿಸುತ್ತದೆ.

ಗುಮ್ಮನಾಯಕನ ಪಾಳ್ಯದ ಮೇಲೆ ದಾಳಿ ಮಾಡಿದ್ದನಾ ಟಿಪ್ಪು ಸುಲ್ತಾನ್?‌ ಪಾಳೇಗಾರರ  ಖಜಾನೆಯಲ್ಲಿದ್ದ ಅಪಾರ ಸಂಪತ್ತು ಎಲ್ಲಿಗೆ ಹೋಯಿತು? ಹೂತು ಹೋಗುತ್ತಿದೆ 700 ವರ್ಷಗಳ ...

ಶರಾವತಿ ಕಾಂಡ್ಲಾ ವಾಕ್‌ವೇ – ಹೊನ್ನಾವರ:
ಅಳಿವಿನಂಚಿನಲ್ಲಿರುವ ಕಾಂಡ್ಲಾ ಸಸ್ಯವರ್ಗದ ಬಗ್ಗೆ ಅರಿವು ಮೂಡಿಸಲು ಸ್ಥಾಪಿಸಲಾದ ಈ ವಾಕ್ ವೇ, ಮ್ಯಾಂಗ್ರೋವ್ ಕಾಡುಗಳ ನಡುವೆ ಮರದ ದಾರಿಯಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 6:30ರ ವರೆಗೆ ಪ್ರವೇಶ, ಮಾತ್ರ 10 ರೂಪಾಯಿ ಶುಲ್ಕ. ಪ್ರಕೃತಿಪ್ರಿಯರಿಗೆ ಇದು ನಿಜವಾದ ಪರಿಪೂರ್ಣತೆಯ ಸ್ಥಳ.

ಗೋಕರ್ಣದಲ್ಲಿ ಭೇಟಿ ನೀಡಲು 22 ಅತ್ಯುತ್ತಮ ಸ್ಥಳಗಳು 2024 (ನವೀಕರಿಸಲಾಗಿದೆ)| ಪ್ರಯಾಣದ  ಪಾತ್ರ

ಕೂರ್ಮಗಡ ದ್ವೀಪ – ಕಾರವಾರ:
ಅರಬ್ಬೀ ಸಮುದ್ರದಲ್ಲಿರುವ ಈ ಆಮೆಯಾಕಾರದ ದ್ವೀಪ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ದೋಣಿಯ ಮೂಲಕ ಮಾತ್ರ ತಲುಪಬಹುದಾದ ಈ ಸ್ಥಳದಲ್ಲಿ ನರಸಿಂಹ ದೇವಾಲಯ, ಬೀಚ್, ಟ್ರೆಕ್ಕಿಂಗ್, ಸ್ನಾರ್ಕ್ಲಿಂಗ್ ಮತ್ತು ನಕ್ಷತ್ರ ವೀಕ್ಷಣೆ ಮುಂತಾದ ಚಟುವಟಿಕೆಗಳಿವೆ. ಅಕ್ಟೋಬರ್‌ನಿಂದ ಮೇವರೆಗಿನ ಸಮಯ ಪ್ರವಾಸಕ್ಕೆ ಸೂಕ್ತ.

ಕಾರವಾರ | ಕೂರ್ಮಗಡ ದ್ವೀಪ: ದೂರವಾದ ಜಟ್ಟಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!