ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಹಲವು ಪುಣ್ಯ ಕ್ಷೇತ್ರಗಳು ಸೇರಿದಂತೆ ನೇಪಾಳ ದೇಶದಲ್ಲಿನ ಪಶುಪತಿ ಹಾಗೂ ಮುಕ್ತಿನಾಥ್ ದೇವಾಲಯಕ್ಕೆ ತೆರಳಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಹಿತ ಜಿಲ್ಲೆಯ ತುಳುವರು ದೇವಳದ ಪ್ರಾಂಗಣದಲ್ಲಿ ತುಳು ಧ್ವಜವನ್ನು ಅರಳಿಸಿ ತುಳು ಪ್ರೇಮವನ್ನು ಮೆರೆದಿದ್ದಾರೆ.
ನೇಪಾಳದಲ್ಲಿರುವ ಚೀನಾ ಗಡಿ ಪ್ರದೇಶದ ಸಮುದ್ರ ಮಟ್ಟದಿಂದ ಸುಮಾರು 13000 ಸಾವಿರ ಅಡಿ ಎತ್ತರದಲ್ಲಿರುವ ಮುಕ್ತಿನಾಥನ ಮುಂದೆ ತುಳು ಲಿಪಿ, ಪ್ರಾಚೀನ ಇತಿಹಾಸ ವಿರುವ, ಜಾನಪದ ಮತ್ತು ಶಿಷ್ಟ ಸಾಹಿತ್ಯ ಸಮ್ರದ್ದವಾಗಿರುವ ತುಳು ಬಾಷೆಯನ್ನು ಕೇಂದ್ರ ಸರಕಾರವು 8 ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕು ಹಾಗೂ ಕರ್ನಾಟಕ ಸರಕಾರವು ರಾಜ್ಯದ 2 ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿದ್ದಾರೆ ಎಂದು ಪ್ರವಾಸದಲ್ಲಿರುವ ತುಳು ಅಭಿಮಾನಿಗಳು ತಿಳಿಸಿದ್ದಾರೆ.
ಉತ್ತರ ಭಾರತದ ಹಲವು ಪುಣ್ಯ ಕ್ಷೇತ್ರಗಳು ಸೇರಿದಂತೆ ನೇಪಾಳ ದೇಶದಲ್ಲಿನ ಪಶುಪತಿ ನಾಥ್ ಹಾಗೂ ಮುಕ್ತಿನಾಥ್ ದೇವಸ್ಥಾನಗಳ ದರ್ಶನಕ್ಕಾಗಿ ತುಳುನಾಡಿನ ಭಕ್ತರ ತಂಡವು ಬಂಟ್ವಾಳ ತಾಲೂಕಿನ ನರಿಕೊಂಬುವಿನ ಜಯಶ್ರೀ ಮತ್ತು ಜಯಕುಮಾರ್ ರವರ ನೇತೃತ್ವದಲ್ಲಿ ತೆರಳಿದ್ದು,ಈ ಸಂದರ್ಭದಲ್ಲಿ ತುಳುನಾಡ ಅಭಿಮಾನಿ ಸದಸ್ಯರು ತುಳುನಾಡ ದ್ವಜವನ್ನು ಅರಳಿಸಿ ಹಳೆಯ ಕಾಲದ ಬೇಡಿಕೆಗೆ ಮುಕ್ತಿ ದೊರಕಲು ಜನ ಜಾಗೃತಿ ಮೂಡಿಸಿದರು.
ಕಳೆದ ವಾರ ನೇಪಾಳಕ್ಕೆ ತೆರಳುವ 117 ಮಂದಿ ಪ್ರವಾಸಿಗರು ದಾರಿಮಧ್ಯೆ ಪ್ರಾಕೃತಿಕ ವಿಕೋಪದಿಂದಾಗಿ ಸಿಲುಕಿದ್ದರು.ದೇವರದಯೆ ಹಾಗೂ ಜಯಕುಮಾರ್ ಮತ್ತು ಚಾಲಕರ ಧೈರ್ಯ,ಸಮಯಪ್ರಜ್ಞೆಯಿಂದ ದೇವರ ದರುಶನ ಭಾಗ್ಯ ದೊರೆತಿತ್ತು.