ಹೊಸದಿಗಂತ ವರದಿ, ಕೊಪ್ಪಳ/ವಿಜಯನಗರ:
ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ಗೇಟ್ ಅಳವಡಿಕೆಗೆ ಫ್ಲಾನ್ ಬಿ ಯಶಸ್ಚಿಯಾಗಿದ್ದು, 60 ಅಡಿ ಅಗಲ, 4 ಅಡಿ ಎತ್ತರದ ಸ್ಟಾಪ್ ಲಾಕ್ ಗೇಟ್ ಎಲಿಮೆಂಟ್ ಅಳವಡಿಕೆ ಮಾಡಲಾಗಿದೆ.
ಶುಕ್ರವಾರ ಕಾರ್ಯಾಚರಣೆ ಭರದಿಂದ ಸಾಗಿದ್ದು, ಆಸ್ಟ್ ಗೇಟ್ (ಸ್ಕೈವಾಕ್) ತೆರವುಗೊಳಿಸುವ ಮೂಲಕ ಅಳವಡಿಕೆಗೆ ಸರಳ ಮಾರ್ಗ ಕಂಡುಕೊಳ್ಳಲಾಯಿತು. ತುಂಗಭದ್ರಾ ಅಣೆಕಟ್ಟೆಯ 19ನೇ ಟ್ರಸ್ಟ್ ಗೇಟ್ ಅಳವಡಿಕೆಗೂ ಮುನ್ನ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಂಗಡಗಿ ಹಾಗೂ ಸಂಸದ ರಾಜಶೇಖರ್ ಹಿಟ್ನಾಳ್ ಅವರು ಗೇಟ್ ಗೆ ಪೂಜೆ ನೆರವೇರಿಸಿದರು. ರಾತ್ರಿ 7 ರಿಂದ ಆರಂಭವಾದ ಗೇಟ್ ಅಳವಡಿಕೆ ಕಾರ್ಯಾಚರಣೆ ರಾತ್ರಿ 9ರವರೆಗೆ ನಡೆಯಿತು.