ಮಣಿಪುರದಲ್ಲಿ ಮುಗಿಯದ ಹಿಂಸಾಚಾರ, ದಾಳಿಯಲ್ಲಿ ನಾಲ್ವರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಪ್ರತ್ಯೇಕ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ವಿಷ್ಣುಪುರ ಹಾಗೂ ಚುರಾಚಂದಪುರ ಜಿಲ್ಲೆಗಳಲ್ಲಿ ಪ್ರತ್ಯೇಕ ಗುಂಡಿನದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೈತ್ರೇಯಿ ಪ್ರಾಬಲ್ಯ ಇರುವ ವಿಷ್ಣುಪುರದ ಖೋಯಿಜುಮಾಂತಬಿ ಪ್ರದೇಶದ ಗ್ರಾಮ ಸ್ವಯಂ ಸೇವಕರ ಮೇಲೆ ದಾಳಿ ನಡೆಸಲಾಗಿದೆ.

ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದು, ದಾಳಿಕೋರರನ್ನು ಸದೆಬಡಿದಿದ್ದಾರೆ. ಕೆಲವು ಕಡೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಇದೀಗ ಎಲ್ಲವೂ ಸಹಜ ಪರಿಸ್ಥಿತಿಯತ್ತ ಮರಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!