ಉತ್ಥಾನ ದ್ವಾದಶಿ: ಅರಕಲಗೂಡಿನಲ್ಲಿ ಬೃಂದಾವನೋತ್ಸವ

ಹೊಸದಿಗಂತ ವರದಿ ಅರಕಲಗೂಡು:

ನವೆಂಬರ್‌ 25ರಂದು ಉತ್ಥಾನ ದ್ವಾದಶಿ ಅಂಗವಾಗಿ ಅರಕಲಗೂಡು ಪಟ್ಟಣದ ಐತಿಹಾಸಿಕ ದೇವಾಲಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ಬೃಂದಾವನೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ರಾತ್ರಿ ಪುಷ್ಪಾಲಂಕಾರ, ದೀಪಾಲಂಕಾರಗಳಿಂದ ಶ್ರೀಯವರನ್ನು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಈ ವೇಳೆ ಪ್ರತಿ ಮನೆಯ ಮುಂದೆ ಹಣ್ಣು, ಕಾಯಿ ನೀಡಿ ದೇವರಿಗೆ ಸೇವೆ ಅರ್ಪಿಸಿ ಆಸ್ತಿಕರು ಭಕ್ತಿ ಮೆರೆದರು. ನಂತರ ಶ್ರೀಯವರನ್ನು ಸ್ವಸ್ಥಾನಕ್ಕೆ ತಂದು ಮಂಗಳಾರತಿಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!