ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಹಮದಾಬಾದ್ನಿಂದ ಸೂರತ್ಗೆ ತೆರಳುತ್ತಿದ್ದ ರೈಲಿನ ಮೇಲೆ ಅಪರಿಚಿತ ವ್ಯಕ್ತಿಗಳು ಓವೈಸಿ ಮತ್ತಿತರ ಪಕ್ಷದ ಮುಖಂಡರು ಕುಳಿತಿದ್ದ ಬೋಗಿಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಬೋಗಿಯ ಗಾಜು ಒಡೆದಿದೆ.
ಈ ವಿಷಯವನ್ನು ಆ ಪಕ್ಷದ ನಾಯಕ ವಾರಿಸ್ ಪಠಾಣ್ ಹೇಳಿದ್ದಾರೆ. ಘಟನೆಯ ಫೋಟೋಗಳನ್ನು ಅವರು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸೂರತ್ನಿಂದ 25 ಕಿಲೋಮೀಟರ್ ದೂರದಲ್ಲಿ ದಾಳಿ ನಡೆದಿದೆ ಎಂದು ತೋರುತ್ತದೆ.
ಗುರುವಾರ (ಫೆಬ್ರವರಿ 3, 2020) ಸಂಸದ ಅಸಾದುದ್ದೀನ್ ಓವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ. ಯುಪಿಯ ಮೀರತ್ನಲ್ಲಿ ಅಸಾದುದ್ದೀನ್ ಓವೈಸಿಯನ್ನು ಕಾರಿನಲ್ಲಿ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುಪಿಯಲ್ಲಿ ಎಂಐಎಂ ಕೂಡ ಸ್ಪರ್ಧಿಸುತ್ತಿರುವುದರಿಂದ ಚುನಾವಣಾ ಪ್ರಚಾರದ ವೇಳೆ ಟೋಲ್ ಪ್ಲಾಜಾ ಬಳಿ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರೆ. ಗುಂಡುಗಳು ಕಾರಿನ ಬಾಗಿಲಿಗೆ ತಗುಲಿದ್ದವು ಆಘಟನೆಯಲ್ಲಿಯೂ ಅಸಾದುದ್ದೀನ್ ಓವೈಸಿ ಸುರಕ್ಷಿತವಾಗಿ ಪಾರಾಗಿದ್ದರು. ಆ ಘಟನೆ ನಡೆದ ಬಳಿಕ ಇದೀಗ ರೈಲಿನಲ್ಲಿ ಪ್ರಯಾಣದ ವೇಳೆ ಕಲ್ಲು ತೂರಿದರು.