ಮನೆ ಎಂದರೆ ಪ್ರತಿಯೊಬ್ಬರ ನೆಮ್ಮದಿ ಹಾಗೂ ಶಾಂತಿಯ ಸ್ಥಳ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕ ಶಕ್ತಿಗಳು ಹರಡಬಹುದು. ಇವು ಮನೆಯ ಶಾಂತಿ, ಆರ್ಥಿಕ ಸ್ಥಿತಿ ಮತ್ತು ಕುಟುಂಬದ ಸಂಬಂಧಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ.
ಹುಣಸೆ ಮರ:
ವಾಸ್ತು ಪ್ರಕಾರ ಹುಣಸೆ ಮರವನ್ನು ಮನೆಯ ಎದುರು ಅಥವಾ ಆವರಣದಲ್ಲಿ ನೆಡಬಾರದು. ಇದು ದುಃಖ, ಅಶಾಂತಿ ಮತ್ತು ಕಳವಳವನ್ನು ತರುತ್ತದೆ ಎಂದು ನಂಬಲಾಗಿದೆ.

ಅಕೇಶಿಯಾ ಮರ:
ಅಕೇಶಿಯಾ ಮರವು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಮರವನ್ನು ಮನೆಯಲ್ಲಿ ಬೆಳೆದರೆ ದುಷ್ಟ ಶಕ್ತಿಗಳು ಆವರಿಸಬಹುದು.
ಗೋಡೆಗೆ ಹತ್ತುವ ಬಳ್ಳಿಗಳು:
ಮನೆಯಲ್ಲಿ ಗೋಡೆಗೆ ಹತ್ತುವ ಬಳ್ಳಿಗಳು ಇದ್ದರೆ ಅವು ಒಳ್ಳೆಯದಲ್ಲ. ಇಂತಹ ಸಸ್ಯಗಳು ಮನೆಯ ಒಳ್ಳೆಯ ಶಕ್ತಿಯನ್ನು ತಡೆದು ನಕಾರಾತ್ಮಕತೆಗೆ ಕಾರಣವಾಗುತ್ತವೆ.

ಒಣಗಿದ ಅಥವಾ ಸತ್ತ ಸಸ್ಯಗಳು
ಒಣಗಿದ ಅಥವಾ ಸತ್ತ ಸಸ್ಯಗಳನ್ನು ಮನೆಯಲ್ಲಿ ಇಡುವುದು ವಾಸ್ತು ಪ್ರಕಾರ ಅಶುಭ. ಇವು ಮನೆಯ ವಾತಾವರಣವನ್ನು ಕೆಡಿಸಿ ದುಃಖವನ್ನು ತರುತ್ತವೆ.
ರಬ್ಬರ್ ಗಿಡ
ಕಪ್ಪು ಮತ್ತು ದಪ್ಪ ಎಲೆಗಳಿರುವ ರಬ್ಬರ್ ಗಿಡವು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ. ಇದರಿಂದ ಕುಟುಂಬ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)
