ನಮ್ಮ ಮನೆವನ್ನು ಸ್ವಚ್ಛವಾಗಿ ಇರಿಸಲು ಬಳಸುವ ಪೊರಕೆ ಕೇವಲ ಉಪಯುಕ್ತ ವಸ್ತು ಮಾತ್ರವಲ್ಲ, ಅದು ವಾಸ್ತು ಶಾಸ್ತ್ರದ ಪ್ರಕಾರ ಪವಿತ್ರತೆಯ ಪ್ರತೀಕವೂ ಹೌದು. ವಾಸ್ತು ತಜ್ಞರ ನಂಬಿಕೆಗೆ ಅನುಸಾರ, ಪೊರಕೆಯನ್ನು ಸರಿಯಾದ ವಿಧಾನದಲ್ಲಿ ಉಪಯೋಗಿಸಿದರೆ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೂ ಲಕ್ಷ್ಮಿ ದೇವಿಯ ಕೃಪೆ ಮನೆಮೇಲಿರುತ್ತದೆ.
ಪೊರಕೆಗೆ ಗೌರವ ಕೊಡಿ : ಪೊರಕೆಯನ್ನು ಸದಾ ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಉತ್ತಮ. ಅದನ್ನು ಸಾರ್ವಜನಿಕ ಸ್ಥಳದಲ್ಲಿ ಅಥವಾ ಎಲ್ಲರಿಗೂ ಕಾಣುವ ರೀತಿಯಲ್ಲಿ ಇರಿಸುವುದು ತಪ್ಪು. ಅದು ಗೌರವಪೂರ್ಣವಾದ ವಸ್ತು. ಅದನ್ನು ಮರೆಮಾಡಿ ಇಡಬೇಕು. ಪೊರಕೆ ಬಿದ್ದಿದ್ದರೆ ತಕ್ಷಣ ಮುಟ್ಟಬೇಡಿ.
ಸಂಜೆಯ ನಂತರ ಕಸದ ಗುಡಿಸೋದು ತಪ್ಪು : ಸೂರ್ಯಾಸ್ತದ ನಂತರ ಮನೆಯ ಒಳಗೆ ಅಥವಾ ಹೊರಗೆ ಪೊರಕೆಯಿಂದ ಸ್ವಚ್ಛತೆ ಮಾಡುವುದು ಹಣದ ನಷ್ಟಕ್ಕೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಎಚ್ಚರಿಕೆ ನೀಡುತ್ತದೆ. ಈ ಸಮಯದಲ್ಲಿ ಗುಡಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ದೂರವಾಗಬಹುದು.
ಪೊರಕೆಯ ಖರೀದಿ ಮತ್ತು ಬಳಕೆ : ವಾಸ್ತು ಪ್ರಕಾರ, ಕೃಷ್ಣಪಕ್ಷದ ದಿನಗಳಲ್ಲಿ ಹೊಸ ಪೊರಕೆಯನ್ನು ಖರೀದಿಸುವುದು ಶುಭಕರ. ಶನಿವಾರದಂದು ಹೊಸದಾಗಿ ಪೊರಕೆಯನ್ನು ಉಪಯೋಗಿಸುವುದರಿಂದ ಅದೃಷ್ಟ ಹೆಚ್ಚುತ್ತದೆ ಎನ್ನಲಾಗಿದೆ. ಒಡೆದ ಅಥವಾ ಹಾಳಾದ ಪೊರಕೆಯಿಂದ ಮನೆ ಗುಡಿಸ ಬಾರದು, ಇದು ದುಷ್ಟ ಶಕ್ತಿಗಳಿಗೆ ಆಹ್ವಾನ ನೀಡಿದಂತಾಗಬಹುದು.
ಅಡುಗೆ ಮನೆಯಲ್ಲಿ ಪೊರಕೆ ಬೇಡ : ಅಡುಗೆಮನೆಯಲ್ಲಿ ಆಹಾರವನ್ನು ತಯಾರಿಸಿ ತಿನ್ನಲಾಗುತ್ತದೆ. ಈ ಹಿನ್ನೆಲೆ ಅಡುಗೆ ಮನೆಯಲ್ಲಿ ಪೊರಕೆ ಮತ್ತು ಒರೆಸುವ ಬಟ್ಟೆಗಳನ್ನು ಇಡುವುದರಿಂದ ಮನೆಯಲ್ಲಿ ವಾಸಿಸುವ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಈ ಸಾಂಪ್ರದಾಯಿಕ ನಂಬಿಕೆಗಳು ವೈಜ್ಞಾನಿಕ ದೃಷ್ಟಿಕೋನದಲ್ಲಿ ದೃಢಪಡಿಸಲ್ಪಟ್ಟಿಲ್ಲದಿದ್ದರೂ, ಈ ನಂಬಿಕೆಗಳು ಮನೆಯಲ್ಲಿ ಶ್ರದ್ಧೆ ಮತ್ತು ಶಿಸ್ತಿನ ಜೀವನ ಶೈಲಿಗೆ ಕಾರಣವಾಗಬಹುದು.(ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)